News Karnataka Kannada
Friday, May 17 2024
ಸಾಂಡಲ್ ವುಡ್

ರಾವಣನ ಪಾತ್ರವನ್ನು ತಿರಸ್ಕರಿಸಿದರ ರಾಕಿಂಗ್ ಸ್ಟಾರ್ ಯಶ್

Rocking Star Yash
Photo Credit : Twitter

ರಾಮಾಯಣ ಆಧಾರಿತ ಕಥೆಯುಳ್ಳ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ ಜೂನ್ 16 ರಂದು ತೆರೆಗೆ ಬರಲು ಬರಲಿದೆ. ರಾಮನ ಪಾತ್ರವನ್ನು ಪ್ರಭಾಸ್, ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡಿದ್ದಾರೆ. ಈ ನಡುವೆ ಮತ್ತೊಂದು ರಾಮಾಯಣ ಕಥೆ ಆಧರಿಸಿ ಸಿನಿಮಾ ಮಾಡೋದಾಗಿ ನಿರ್ದೇಶಕರೊಬ್ಬರು ಘೋಷಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಮತ್ತೊಬ್ಬ ನಿರ್ದೇಶಕರು ರಾಮಾಯಣ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಕೆಜಿಎಫ್ ಸ್ಟಾರ್ ಯಶ್ ರಾವಣನ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ನಟ ಯಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೆಜಿಎಫ್ ನಟ ಯಶ್ಗೆ ರಾವಣನ ಪಾತ್ರಕ್ಕೆ ಆಫರ್ ಬಂದಿದೆ ಎಂಬ ಮಾತುಗಳು ಕೇಳಿಬಂದಿತ್ತು. ಯಶ್ ಕೂಡ ರಾವಣ ಪಾತ್ರ ಮಾಡಲು ತುಂಬಾ ಉತ್ಸುಕರಾಗಿದ್ದರು. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿರುವುದರಿಂದ, ಯಶ್ ರಾವಣ ಪಾತ್ರಕ್ಕೆ ಬಗ್ಗೆ ಯೋಚಿಸಿದ್ದರು ಎಂದು ಈ ಟೈಮ್ಸ್ ವರದಿ ಮಾಡಿದೆ.

ಆದ್ರೆ ಯಶ್ ಆಪ್ತರು ಹಾಗೂ ಕೆಲ ಸ್ನೇಹಿತರು ಈ ರೀತಿಯ ಪಾತ್ರ ಮಾಡಬೇಡಿ ಎಂದು ಯಶ್ ಗೆ ಸಲಹೆ ನೀಡಿದ್ದಾರೆ ಎಂದು ಈ ಟೈಮ್ಸ್ ವರದಿ ಮಾಡಿದೆ. ಯಶ್ ವಿಲನ್ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ.

ಯಶ್ ನೆಗೆಟಿವ್ ಪಾತ್ರದಲ್ಲಿ ನಟಿಸುವುದನ್ನು ನೋಡಿ ಅವರ ಅಭಿಮಾನಿಗಳು ಇಷ್ಟಪಡುವುದಿಲ್ಲ ಎನ್ನುವುದು ಯಶ್ ಹೇಳಿದ್ದಾರೆ. ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತಾಡಿದ ಯಶ್, ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ತುಂಬಾ ಜಾಗರೂಕರಾಗಿರಬೇಕು. ತುಂಬಾ ಭಾವುಕರಾಗಿದ್ದಾರೆ ಮತ್ತು ನಾನು ಅವರ ಇಚ್ಛೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.  ರಾಕಿಂಗ್​ ಸ್ಟಾರ್​ ಅವರು ರಾವಣನ ಪಾತ್ರವನ್ನು ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು