News Karnataka Kannada
Friday, May 10 2024
ಸಾಂಡಲ್ ವುಡ್

ನಂಜನಗೂಡು: ಹಳ್ಳದಕೇರಿ ಶಾಲೆಗೆ ಮಾಸ್ಟರ್ ಆನಂದ್, ವಂಶಿಕ ಭೇಟಿ

Van
Photo Credit : By Author

ನಂಜನಗೂಡು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳದಕೇರಿ ಶಾಲೆಯಲ್ಲಿ ನಡೆಯುತ್ತಿರುವ ದಸರಾ ಉಚಿತ ಶಿಬಿರಕ್ಕೆ ಅನಿರೀಕ್ಷಿತವಾಗಿ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಹಾಗೂ ಪುತ್ರಿ ಕಿರುತೆರೆಯ ಬಾಲ ನಟಿ ವಂಶಿಕ ಭೇಟಿ ನೀಡಿದರು.

ನಂಜನಗೂಡಿನ ಕುಲ ದೇವರನ್ನ ಭೇಟಿ ಮಾಡಲು ಬಂದಿದ್ದ ಆನಂದ್ ಮತ್ತು ಪುತ್ರಿ ವಂಶಿಕ ಅವರು, ಹಳ್ಳದಕೇರಿ ಶಾಲೆಯಲ್ಲಿ ನಡೆಯುತ್ತಿರುವ ದಸರಾ ಶಿಬಿರದ ವಿಚಾರ ತಿಳಿದು ಶಾಲೆಗೆ ಭೇಟಿ ನೀಡಿದರು. ಮಕ್ಕಳೊಂದಿಗೆ ಕೆಲವು ಸಮಯಗಳ ಕಳೆದು ಕೆಲವು ವಿಚಾರಗಳನ್ನ ಚರ್ಚಿಸಿ ನಾವು ಶಾಲೆಯಲ್ಲಿ ಓದುವಾಗ ಯಾವುದೇ ರೀತಿಯ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಹಾಗೂ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಕರಿದ್ದಾರೆ ಅವರ ಮಾರ್ಗದರ್ಶನ ಪಡೆದು ಶಾಲೆಯಲ್ಲಿ ಚೆನ್ನಾಗಿ ಓದಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಎಂದರು.

ಶಾಲೆಯಲ್ಲಿ ಯಾವುದೇ ಜಾತಿಭೇದ ಮಾಡದೆ ಕಲಿಕೆಗಷ್ಟೇ ಗಮನ ಕೊಡಬೇಕು ಪೋಷಕರಿಗೆ ಉತ್ತಮ ಮಕ್ಕಳಾಗಬೇಕು ಶಿಬಿರದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ಮುಂದೆ ಬನ್ನಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಶಿಬಿರದ ಆಯೋಜಕರಾದ ಸತೀಶ್ ದಳವಾಯಿ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಮಾಸ್ಟರ್ ಆನಂದ್ ಹಾಗೂ ವಂಶಿಕಾಗೆ ಶಾಲು ಹಾರ ಹಾಕಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ರಂಗನಾಥ್, ತಾಲೂಕು ಬಿಆರ್ ಸಿ ಕೆ ಜಿ ಮಹೇಶ್ ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಸಿಆರ್‌ಪಿಗಳಾದ ದೊರೆ ಸ್ವಾಮಿ, ಪ್ರಕಾಶ್, ಅಗಸ್ತ್ಯ ಫೌಂಡೇಶನ್ ಶಿಕ್ಷಕರಾದ ಸತೀಶ್ ಸದಾನಂದ ಮತ್ತು ಮಕ್ಕಳು ಹಾಜರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು