ಬೆಂಗಳೂರು: ಸಮುದಾಯ ಬೆಂಗಳೂರು ವತಿಯಿಂದ ಅಗಲಿದ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ನ.27 ಭಾನುವಾರ ಸಂಜೆ 4.30ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಕವಿ ಮತ್ತು ನಾಟಕಕಾರರು ಹೆಚ್.ಎಸ್. ಶಿವಪ್ರಕಾಶ್, , ಕವಿ ಮತ್ತು ಸಮಾಜಮುಖಿ ಚಿಂತಕರು ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕವಿ ಮತ್ತು ಚಿಂತಕರು ಅಗ್ರಹಾರ ಕೃಷ್ಣಮೂರ್ತಿ, ಮಹಿಳಾ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಕಿ ವಿಮಲಾ ಕಲಾಗರ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಸುಚೇಂದ್ರ ಪ್ರಸಾದ್, ಗಾಯಕ ಮತ್ತು ನಿರ್ದೇಶಕರು ಜನಾರ್ಧನ್ ಹೆಚ್.(ಜನ್ನಿ), ಶರತ್ ಲೋಹಿತಾಶ್ವ ಮತ್ತು ಲೋಹಿತಾಶ್ವ ಕುಟುಂಬ ವರ್ಗದವರು ಮತ್ತು ಸಿ.ಕೆ.ಗುಂಡಣ್ಣ, ಲೋಹಿತಾಶ್ವ ಅವರ ಆಪ್ತಮಿತ್ರ ಭಾಗಿಯಾಗಲಿದ್ದಾರೆ.