ಬೆಂಗಳೂರು: ಯುವತಂಡವೊಂದು ಬನ್ ಟೀ ಹೆಸರಿನಲ್ಲಿ ಸಿನಿಮಾ ತಯಾರಿಸಿದ್ದು, ಅದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಖಾಕಿ ಸಿನಿಮಾ ಬರಹಗಾರರಲ್ಲಿ ಒಬ್ಬರಾದ ಉದಯ್ ಕುಮಾರ್ ಪಿ.ಎಸ್ ಅವರ ಎರಡನೇ ಸಿನಿಮಾ ಇದು. ಈ ಹಿಂದೆ ಅವರು ಕಾರ್ಮೋಡ ಸರಿದು ಚಿತ್ರ ತಯಾರಿಸಿದ್ದು, ಇದೀಗ ಬನ್ ಟೀ ಹೆಸರಿನಲ್ಲಿ ಸಿನಿಮಾ ತಯಾರಿಸಿದ್ದಾರೆ.
ಟ್ರೇಲರ್ ಅನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ಉದಯ್ ಹೇಳಿದ ಕಥೆ ಇಷ್ಟವಾಯ್ತು ಈ ದಿನಗಳಲ್ಲಿ ಹಂಚಿ ಉಣ್ಣದೆ ಬರಿ ಬಾಚಿಕೊಳ್ಳುವ ಮನಸ್ಥಿತಿ ಅದರಿಂದ ಉಂಟಾಗುವ ಸಾಮಾಜಿಕ ಸ್ಥಿತಿಗತಿ ಕುರಿತು ಕಥೆ ಸಾಗುತ್ತದೆ ಎಂದು ತಿಳಿಸಿದರು.