ಹೊಸಬರೆ ಸೇರಿಕೊಂಡು ಸಿದ್ಧಪಡಿಸಿರುವ ಬಾ ನಲ್ಲೆ ಮದುವೆಗೆ ಚಿತ್ರದ ಧ್ವನಿ ಸುರುಳಿಯನ್ನು ಭುಜಗನಪುರ ಗ್ರಾಮದಲ್ಲಿ ಬಿಡುಗಡೆ ಮಾಡಲಾಯಿತು.
ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ಬಾ ನಲ್ಲೆ ಮದುವೆಗೆ ಚಿತ್ರವನ್ನು ಎಂ.ಯೋಗೇಶ್ ನಂದನ್ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡಿದ್ದಾರೆ .
ಈ ಚಿತ್ರದ ಪೋಸ್ಟರ್ ಅನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ತಂಡಕ್ಕೆ ಶುಭವನ್ನು ಹಾರೈಸಿದರು. ಇಂದು ನಟ ಮೈಸೂರು ಶ್ರೀಹರಿ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಚಲನಚಿತ್ರದ ಮೊದಲ ಗೀತೆ ನಮ್ಮಮ್ಮ ತಾಯಿ ಮಾರಮ್ಮ ದೇವಿ ಬರುವಳು ಪೂಜೆ ಮಾಡಿರಿ ಎನ್ನುವ ದ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು. ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ವೀಕ್ಷಣೆ ಮಾಡಿದ್ದಾರೆ.
ನಿರ್ದೇಶಕ ಎಂ.ಯೋಗೀಶ್ ನಂದನ್ ಮಾತನಾಡಿ, ನನ್ನ ತಾಯಿಯೇ ನನಗೆ ಸಹಕಾರ ನೀಡಿ ಸಿನಿಮಾ ನಿರ್ಮಾಣ ಮಾಡಲು ಸ್ಪೂರ್ತಿಯಾದರು. ಶೀರ್ಷಿಕೆ ಹೇಳುವಂತೆ ಪ್ರೀತಿಯ ಕಥೆಯನ್ನು ಹೊಂದಿದೆ. ಅತಿಯಾದ ಪ್ರೀತಿ ಇಬ್ಬರಿಂದ ಆದರೆ ಅದು ಮುಳುವಾಗುತ್ತದೆ. ಕಷ್ಟಗಳು ಎದುರಾಗಿ, ಹಳ್ಳಿಗಳಲ್ಲಿ ಪ್ರೇಮಿಗಳು ಯಾವ ರೀತಿ ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಎರಡು ತಿಂಗಳಲ್ಲಿ ತೆರೆಯ ಮೇಲೆ ಬರಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುವ ಸಾಹಿತಿ ಶ್ರೀಧರ್, ಮುಖಂಡ ಕೆಂಪರಾಜು, ನಾಯಕ ನಟ ಅರ್ಜುನ್, ಗ್ರಾಮ ಪಂಚಾಯತಿ ಸದಸ್ಯ ಗಟ್ಟವಾಡಿ ಮಂಜುನಾಥ್, ಮುಖಂಡರಾದ ರಾಜಣ್ಣ ಚನ್ನಬಸಪ್ಪ ಬಿಳಿಗಿರಿ ಮಂಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.