ಬೆಂಗಳೂರು: ಗೋವಾದಲ್ಲಿ ಸಮ್ಮರ್ ಸಾಲ್ಟ್ ಮಾಡುವ ವೇಳೆ ಕುತ್ತಿಗೆಗೆ ತೀವ್ರ ಪೆಟ್ಟಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ನಟ ದಿಗಂತ್ ಅವರನ್ನು ಬುಧವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ನಿನ್ನೆ ರಾತ್ರಿ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ದಿಗಂತ್ ಚೇತರಿಸಿಕೊಳ್ಳುತ್ತಿದ್ದು ಇನ್ನು ಮೂರು ತಿಂಗಳು ಶೂಟಿಂಗ್ನಲ್ಲಿ ಪಾಲ್ಗೊಳ್ಳದೆ ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ದಿಗಂತ್ ಗೆ ಸೂಚನೆ ನೀಡಿದ್ದಾರೆ.
ಘಟನೆಯ ಕುರಿತು ಮಾತನಾಡಿದ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ, ‘ರಜೆ ಆನಂದಿಸಲು ಗೋವಾಗೆ ತೆರಳಿದ್ದೆವು. ಅಲ್ಲಿ ಸಮ್ಮರ್ ಸಾಲ್ಟ್ ಮಾಡುವಾಗ ಲ್ಯಾಂಡಿಂಗ್ ತಪ್ಪಾಗಿ ಈ ಘಟನೆ ನಡೆದಿದೆ. ಗೋವಾ ಸರ್ಕಾರದವರು ನಮಗೆ ನೀಡಿದ ಬೆಂಬಲ ದೊಡ್ಡದು. ಆದ್ದರಿಂದ ಏರ್ಲಿಫ್ಟ್ ಮಾಡೋದು ಸಾಧ್ಯವಾಯ್ತು. ಇನ್ನು ಮುಂದೆ ದಿಗಂತ್ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತೇನೆ. ಸರ್ಜರಿ ಯಶಸ್ವಿಯಾಗಿದೆ. ನಾನು ಮತ್ತೆ ಸಮ್ಮರ್ ಸಾಲ್ಟ್ ಮಾಡಲು ರೆಡಿ ಆಗಿದ್ದೇನೆ ಅಂತ ದಿಗಂತ್ ವೈದ್ಯರಲ್ಲಿ ತಮಾಷೆ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ’ ಎಂದರು.