ಸಾಂಡಲ್ ವುಡ್ : ಇಂದು ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಸ್ಯಾಂಡಲ್ ವುಡ್ ತಾರೆಯರು ಕೂಡ ಹಬ್ಬದ ಆಚರಣೆಯಲ್ಲಿ ಬಿಝಿಯಾಗಿದ್ದಾರೆ.
ನಿರ್ದೇಶಕ ರಿಷಭ್ ಶೆಟ್ಟಿಯವರಿಗೆ ಈ ವರ್ಷದ ಗಣೇಶ ಹಬ್ಬ ಬಹಳ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ‘ಕಾಂತಾರ’ ಸಿನಿಮಾ ಸೆಟ್ನಲ್ಲೇ ಹಬ್ಬವನ್ನು ಆಚರಿಸುತ್ತಿದ್ದಾರೆ. “ಪ್ರತಿ ವರ್ಷ ಮನೆಯಲ್ಲಿ ಗಣೇಶನನ್ನು ತಂದು ಹಬ್ಬ ಆಚರಿಸಲಾಗುತ್ತಿತ್ತು. ಈ ವರ್ಷ ಸಿನೆಮಾ ಸೆಟ್ ನಲ್ಲಿ ಗಣೇಶನನ್ನು ತಂಡು ಹಬ್ಬ ಮಾಡಲಾಗುತ್ತಿದೆ. ಇದು ಹೊಸ ಅನುಭವ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ರಿಷಭ್.
ಇನ್ನೂ ತಮಿಳು, ತೆಲುಗು, ಕನ್ನಡದ ‘ಹೆಡ್ ಬುಷ್’ ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬಿಝಿಯಾಗಿರುವ ಡಾಲಿ ಧನಂಜಯ್ ಹಬ್ಬಕ್ಕೆಂದು ಹುಟ್ಟೂರಿಗೆ ಹೋಗಿದ್ದಾರೆ. ” ಹಬ್ಬದ ನೆಪದಲ್ಲಿ ಎರಡು ದಿನ ಶೂಟಿಂಗ್ ಗೆ ರಜಾ ಹಾಕಿ ಊರಿಗೆ ಹೊರಟಿದ್ದೇನೆ. ಅಪ್ಪ,ಅಮ್ಮನೊಂದಿಗೆ ಎರಡು ದಿನ ಕಳೆಯುತ್ತೇನೆ. ಹಬ್ಬದ ಅಡುಗೆ ಉಂಡು ಬರುತ್ತೇನೆ” ಎಂದು ಧನಂಜಯ್ ಹೇಳಿದ್ದಾರೆ
‘ಅಪೂರ್ವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟಿ ಅಪೂರ್ವ ತಮ್ಮ ಮನೆಯಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಮಾಡುತ್ತಿದ್ದಾರೆ. “ಗಣೇಶ ಹಬ್ಬವೆಂದರೆ ನಮ್ಮ ಮನೆಯಲ್ಲಿ ದೊಡ್ಡ ಹಬ್ಬ. ಅಮ್ಮ ನಾನಾರೀತಿಯ ಅಡುಗೆ ಮಾಡುತ್ತಾರೆ. ಮನೆಯಲ್ಲಿಯೂ ಚಿಕ್ಕ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತೇವೆ ಎಂದು ಅಪೂರ್ವ ಹೇಳಿದ್ದಾರೆ”