ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನಗಲಿ ದಿನಗಳೇ ಕಳೆದಿವೆ. ಸಹಸ್ರಾರು ಅಭಿಮಾನಿಗಳು ಇನ್ನೂ ಪುನೀತ್ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ.
ಪುನೀತ್ ಅವರ 11ನೇ ದಿನದ ಕಾರ್ಯವನ್ನು ಸೋಮವಾರ ಮಾಡಲು ರಾಜ್ ಕುಟುಂಬ ನಿರ್ಧರಿಸಿದ್ದು, ಅಭಿಮಾನಿಗಳಿಗೆ ಅನ್ನದಾನ ಮಾಡಲಾಗುತ್ತದೆ.
ಪ್ಯಾಲೇಸ್ ಗ್ರೌಂಡ್ನಲ್ಲಿ ಕಾರ್ಯ ನಡೆಯಲಿದ್ದು, ದೊಡ್ಮನೆ ಮಂದಿ ಹಾಗೂ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಾರ್ಯದಲ್ಲಿ ಪುನೀತ್ಗೆ ಪುಷ್ಪ ನಮನ ಸಲ್ಲಿಸಲಾಗುವುದು ಜೊತೆಗೆ ಅಭಿಮಾನಿಗಳಿಗೆ ಅನ್ನದಾನ ಮಾಡಲಾಗುವುದು.