ನಟ ರಜನಿಕಾಂತ್ ಒಂದೂವರೆ ವರ್ಷಗಳ ನಂತರ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು, ಇಂದು ‘ಅಣ್ಣಾತೆ’ ಚಿತ್ರ ರಿಲೀಸ್ ಆಗಿದೆ.
ದೀಪಾವಳಿಯಂದೇ ಅಣ್ಣಾತೆ ಚಿತ್ರ ಬಿಡುಗಡೆಯಾಗಿದ್ದು, ಬೆಳಗ್ಗೆ 8ರಿಂದಲೇ ಭಾರೀ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ 1200 ಕ್ಕೂ ಸ್ಕ್ರೀನ್ ನಲ್ಲಿ ಇಂದು ಅಣ್ಣಾತೆ ಚಿತ್ರ ಪ್ರದರ್ಶನ ನೀಡುತ್ತಿದ್ದು, ಭರ್ಜರಿ ಹಿಟ್ ಆಗುವ ನಿರೀಕ್ಷೆ ಇದೆ.
ಈ ಚಿತ್ರದಲ್ಲಿ ಅಣ್ಣಾತೆ ಚಿತ್ರ ಕೀರ್ತಿ ಸುರೇಶ್, ನಯನತಾರ, ಪ್ರಕಾಶ್ ರೈ, ಜಗಪತಿ ಬಾಬು, ಖುಷ್ಬೂ ಸೇರಿದಂತೆ ಎಲ್ಲಾ ಖ್ಯಾತ ಕಲಾವಿದರೂ ಈ ಚಿತ್ರದಲ್ಲಿ ತಲೈವಾಗೆ ಸಾಥ್ ಕೊಟ್ಟಿದ್ದಾರೆ.
ಈ ಚಿತ್ರಕ್ಕೆ ನಿರ್ದೇಶಕ ಶಿವ ಆಕ್ಷನ್ ಕಟ್ ಹೇಳಿದ್ದು, ಸನ್ ಪಿಕ್ಷರ್ಸ್ ನಿರ್ಮಾಣದ ಹೊಣೆಹೊತ್ತಿದೆ. ಈ ಬಾರಿ ರಜನಿ ಸಿನಿಮಾ ದೀಪಾವಳಿಯಂದೇ ರಿಲೀಸ್ ಆಗಿರುವುದು ಅವರ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
ರಜನಿ ಹೆಚ್ಚು ಸಿನಿಮಾಗಳಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುತ್ತಾರೆ, ಆದರೆ ಅಣ್ಣಾತೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.
ಅಣ್ಣಾತೆ ಚಿತ್ರವು ಅಣ್ಣ-ತಂಗಿ ನಡುವಿನ ಸೆಂಟಿಮೆಂಟ್ ಕಥೆಯಾಗಿದೆ. 70ರ ವಯಸ್ಸಿನಲ್ಲಿಯೂ ರಜನಿ 20ರ ಯುವಕನಂತೆ ಸಿನಿಮಾದಲ್ಲಿ ನಟಿಸಿರುವುದು ಮೆಚ್ಚುಗೆಯ ವಿಷಯವಾಗಿದೆ.