ಸ್ಯಾಂಡಲ್ವುಡ್ :ಸಂಚಾರಿ ವಿಜಯ್ ಇದ್ದಿದ್ರೆ ಇವತ್ತು ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಯಾಕಂದ್ರೆ ಈ ಸಿನಿಮಾವನ್ನ ವಿಜಿ ಸಿಕ್ಕಾಪಟ್ಟೆ ಇಷ್ಟಪಟ್ಟು ಮಾಡಿದ್ರು. ಸಂಚಾರಿ ವಿಜಯ್ ಅಂದ್ರೇನೆ ಹಾಗೇ ಪಾತ್ರಗಳು ಎಲ್ಲವೂ ವಿಭಿನ್ನವಾಗಿಯೇ ಇರ್ತಾ ಇದ್ವು. ಆದ್ರೆ ಇಂಥದ್ದೊಂದು ಪಾತ್ರವನ್ನ ತೆರೆ ಮೇಲೆ ನೋಡುವಷ್ಟರಲ್ಲಿ ವಿಜಿ ಇಡೀ ಭೂಲೋಕವನ್ನೇ ಬಿಟ್ಟು ಹೋದ್ರುಅವರಿಲ್ಲದ ನೋವಲ್ಲೇ ಪುಕ್ದಟ್ಟೆ ಲೈಫು ಥಿಯೇಟರ್ ಗೆ ಬಂದಿದೆ. ಪ್ರೇಕ್ಷಕರು ಹಾಡಿ-ಮೆಚ್ಚಿದ್ದಾರೆ. ಸಿನಿಮಾ ನೋಡಿ ಕಣ್ಣೀರಾಗಿದ್ದಾರೆ. ವಿಜಿ ನೆನೆದು ಭಾವುಕರಾಗಿದ್ದಾರೆ. ಇಷ್ಟೊಳ್ಳೆ ಸಿನಿಮಾ ಕೊಟ್ಟ ಅತ್ಯದ್ಭುತ ನಟನನ್ನ ಕಳೆದುಕೊಂಡು ಬಿಟ್ಟೆವಲ್ಲ ಅಂತ ಕೊರಗಿದ್ದಾರೆ. ಅದೆಲ್ಲ ಭಾವುಕ ನೋವಿನ ನಡುವೆ ಸಿನಿಮಾ ಗೆದ್ದಿದೆ. ಇಡೀ ವೀಕ್ಷಕ ವರ್ಗದಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.ಒಂದು ಸಿನಿಮಾಗೆ ನಿಜವಾದ ಪ್ರಚಾರಕರೆಂದರೆ ಅದು ಪ್ರೇಕ್ಷಕರು. ಒಬ್ಬ ಪ್ರೇಕ್ಷಕನಿಗೆ ಸಿನಿಮಾ ಇಷ್ಟವಾದ್ರೆ ಮುಗೀತು ಅದು ಎಲ್ಲರಿಗೂ ತಲುಪಿಯೇ ತಲುಪುತ್ತೆ. ಇದೀಗ ಪುಕ್ಸಟ್ಟೆ ಲೈಫಿನ ಕಥೆಯೂ ಹಾಗೇ ಆಗಿದೆ. ಸಿನಿಮಾ ನೋಡಿದವರ ಸೋಚಿಯಲ್ ಮೀಡಿಯಾದಲ್ಲಿ ಸಿನಿಮಾದ ಅದ್ಧೂರಿತನ ರಾರಾಜಿಸುತ್ತಿದೆ. ನಾವು ನೋಡಿ ಆಯ್ತು ನೀವು ಕಣ್ತುಂಬಿಕೊಂಡು ಬಿಡಿ ಅಂತಿದ್ದಾರೆ.
ಇದೀಗ ನಟ ರಕ್ಷಿತ್ ಶೆಟ್ಟಿ, ವಸಿಷ್ಠ ಸಿಂಹ, ಅನೀಶ್ ಹಾಗೂ ಬೆಲ್ ಬಾಟಂ ಚಿತ್ರತಂಡ ಇಂದು ಪುಕ್ಸಟ್ಟೆ ಲೈಫು
ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ತಾವೆಲ್ಲರೂ ಚಿತ್ರತಂಡದ ಪರ ಇದ್ದೇವೆ ಎನ್ನುವಭರವಸೆಯನ್ನು ನೀಡುತ್ತಿದ್ದಾರೆ. ಇಂದು ಸಂಜೆ 6.30ಕ್ಕೆ ಗೋಪಾಲನ್ ಆರ್ಕೆಡ್ ಮಾಲ್ ನಲ್ಲಿಇವರೆಲ್ಲರೂ ಸಿನಿಮಾ ವೀಕ್ಷಿಸಿ ಚಿತ್ರತಂಡ್ಕಕೆ ಸಾಥ್ ನೀಡಲಿದ್ದಾರೆ.ರಂಗಭೂಮಿ ಪ್ರತಿಭೆ ಅರವಿಂದ್ ಕುಪ್ಳೀಕರ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಮೊದಲ ಬಾರಿಗೆನೆ ನಿರ್ದೇಶನದಲ್ಲಿ ಗೆಲುವು ಕಂಡಿದ್ದಾರೆ. ಒಂದೊಳ್ಳೆಸಾಮಾಜಿಕ ಸಂದೇಶ ಹಾಗೂ ಕಾಮಿಡಿ ಝಲಕ್ ಹೊಂದಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮುಸ್ಲಿಂಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಮಾತಂಗಿ ಪ್ರಸನಾ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು,ಅಚ್ಯುತ್ ಕುಮಾರ್ ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ. ವಾಸು ದೀಕ್ಷಿತ್ ಸಂಗೀತ, ಪೂರ್ಣಚಂದ್ರ
ತೇಜಸ್ವಿ ಹಿನ್ನೆಲೆ ಸಂಗೀತ, ಅಧ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದ್ದು, ಸರ್ವಸ್ವ ಪ್ರೊಡಕ್ಷನ್ಸ್
ನಲ್ಲಿ ಸಿನಿಮಾ ನಿರ್ಮಾಣವಾಗಿದೆ.