ಸ್ಯಾಂಡಲ್ ವುಡ್ ಖ್ಯಾತ ನಟ, ನಿರ್ದೇಶಕ ಎಸ್. ನಾರಾಯಣ್ ಅವರ ಫೇಸ್ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಜನರಿಂದ ಹಣ ಕೇಳುತ್ತಿದ್ದಾರೆ.
‘ಮೊಸಕ್ಕೆ ಒಳಗಾಗಬೇಡಿ, ಎಚ್ಚರಿಕೆಯಿಂದ ಇರಿ’ಎಂದು ಎಸ್. ನಾರಾಯಣ್ ವಿಡಿಯೋ ಸಂದೇಶದ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.
‘ಯಾರೋ ನನ್ನ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಜನರಿಗೆ ಮೆಸೇಜ್ ಕಳುಹಿಸಿ ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ನನ್ನ ಹೆಸರಿನ ಫೇಕ್ ಫೇಸ್ ಬುಕ್ ಖಾತೆ ಮೂಲಕ ಯಾರಾದರೂ ಹಣ ಕಳೆದುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ. ಯಾರು ಮೆಸೇಜ್ ಗಳಿಗೆ ಸ್ಪಂದಿಸಬೇಡಿ ಎಂದು ಎಸ್. ನಾರಾಯಣ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.