ಸ್ಯಾಂಡಲ್ವುಡ್: ಬೃಹತ್ ಹಾಗು ಮನಸೆಳೆಯೋ ಸೆಟ್, ಅದರೊಳಗೆ ಅಡಕವಾಗಿದ್ದ ಎಲ್ಇಡಿ ಪರದೆ. ಅಟ್ರ್ಯಾಕ್ಟಿವ್ ಆಗಿ ಡಿಸೈನ್ ಮಾಡಿದ್ದ ವೇದಿಕೆ, ಒಂದೇ ಕಾರ್ಯಕ್ರಮದಲ್ಲಿ ಒಂದಾದ ನಾನಾ ದೇಶಗಳ ಕನ್ನಡ ಮನಸ್ಸುಗಳು…ಇವರೊಟ್ಟಿಗೆ ಮಾತುಕತೆಗಿಳಿದ ನವರಸ ನಾಯಕ ಜಗ್ಗೇಶ್ ಇವೆಲ್ಲವೂ ಕಂಡಿದ್ದು ತೋತಾಪುರಿ’ ಸಿನೆಮಾದ ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮದಲ್ಲಿ. ಹೌದು ವಿಜಯಪ್ರಸಾದ್ ನಿರ್ದೇಶನವಿರುವ ತೋತಾಪುರಿ ಚಿತ್ರದ ಸಧ್ಯ ಎಲ್ಲರ ಗಮನ ತನ್ನತ್ತ ಸೆಳೆದಿದ್ದು ಬಿಡುಗಡೆಗೂ ಸಜ್ಜಾಗ್ತಿದೆ. ಈ ಮಧ್ಯೆ ಇತ್ತಿಚಿಗಷ್ಟೇ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್’ ಹಾಡು ರಿಲೀಸ್ ಆಗು ಮಿಲಿಯನ್ಗಟ್ಟಲೆ ಹಿಟ್ ದಾಖಲಿಸಿತ್ತು. ಈ ಖುಷಿಯನ್ನ ಸೆಲೆಬ್ರೇಟ್ ಮಾಡಲು ವಿದೇಶಿ ಕನ್ನಡಿಗರೆಲ್ಲಾ ಒಟ್ಟಾಗಿ ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮವನ್ನ ಭಾನುವಾರ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ಹಾಜರಾಗೋ ಮೂಲಕ ಅಲ್ಲಿನ ಅಭಿಮಾನಿಗಳಿಗೆ ಹಬ್ಬದೂಟದ ಸಂಭ್ರಮ ನೀಡಿದ್ದಾರೆ.
ಸತತವಾಗಿ ಮೂರುವರೆ ತಾಸು ನಡೆದ ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಸಿನಿಯಾನ, ಅವರ ಕುಟುಂಬ, ದಾಂಪತ್ಯ, ಕನ್ನಡ ಭಾಷೆ, ಹೋರಾಟ, ಡಾ.ರಾಜ್ಕುಮಾರ್ ಅವರೊಂದಿಗಿನಿ ಒಡನಾಟ, ಪುನೀತ್ ಅವರೊಟ್ಟಿಗೆ ಸಾಗಿದ ದಿನಗಳ ಮೆಲುಕು, ಹಾಗು ಅವರ ಸಿನೆಮಾದ ಕಾಮಿಡಿಗಳು, ಹಾಡು ಹಾಗೂ ತೋತಾಪುರಿ ಚಿತ್ರದ ಕುರಿತು ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ಳೋದ್ರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನಾ ದೇಶಗಳಲ್ಲಿ ನೆಲೆಸಿರೋ ಅನಿವಾಸಿ ಕನ್ನಡಿಗರ ಪ್ರಶ್ನೆಗಳಿಗೆ ಉತ್ತರ ನೀಡೋ ಮೂಲಕ ವಿದೇಶಿ ಕನ್ನಡಿಗರ ಮನಸುಗಳಿಗೆ ಲಗ್ಗೆ ಇಟ್ಟರು.
ಕೆನಡಾದ ಡ್ರೀಮ್ ಮೀಡಿಯಾ ಆಯೋಜಿಸದ್ದ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ಜಗ್ಗೇಶ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಈ ಥರದ ಕಾರ್ಯಕ್ರಮ ಬಹುಶಃ ಕನ್ನಡದ ಮಟ್ಟಿಗೆ ಇದೇ ಮೊದಲು. ತಾಂತ್ರಿಕತೆ ಬೆಳೆದಂತೆ ಅದನ್ನು ಬಳಸಿಕೊಳ್ಳುತ್ತಾ ಸಾಗಬೇಕು. ಆಗಲೇ ನಾವು ಈ ಟ್ರೆಂಡ್ ಜೊತೆ ಸಾಗಲು ಸಾಧ್ಯ ಎಂದು ಹೇಳಿದ ಜಗ್ಗೇಶ್, ದೇಶ-ವಿದೇಶಗಳಲ್ಲಿ ತೋತಾಪುರಿ ಹಾಡು ಸಖತ್ ಹಿಟ್ ಆಗಿದೆ. ಈಗಾಗಲೇ ಮಿಲಿಯನ್ಗಟ್ಟಲೆ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ನೋಡಿ ಹರಸಿ ಎಂದರು.
ತೋತಾಪುರಿ ಚಿತ್ರಕ್ಕೆ ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಬಂಡವಾಳ ಹೂಡಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನವರಸ ನಾಯಕನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಸೋಂಕು ಪತ್ತೆ