News Karnataka Kannada
Monday, April 29 2024
ಸಾಂಡಲ್ ವುಡ್

ಗುರುರಾಜ ಕುಲಕರ್ಣಿ ನಿರ್ದೇಶನದ ‘ಅಮೃತ ಅಪಾರ್ಟ್ ಮೆಂಟ್ಸ್’ ರಿಲೀಸ್ ಗೆ ರೆಡಿ..!

New Project 2021 11 24t100229.085
Photo Credit :

ಸ್ಯಾಂಡಲ್ ವುಡ್: ಸಿನಿಮಾ ಕ್ಷೇತ್ರವೇ ಅಂತದ್ದು.. ಕಲರ್ ಫುಲ್ ದುನಿಯಾದಲ್ಲಿ ಕಲರ್ ಕಲರ್ ಆಸೆಗಳು ಚಿಗುರೊಡೆಯುತ್ತೆ. ದೂರದಿಂದ ನಿಂತು ನೋಡಿದರೇ ಬಣ್ಣದ ಲೋಕದಲ್ಲಿ ನಾವೂ ಕೂಡ ಮಿಂದೇಳಬೇಕೆಂಬ ಬಯಕೆ ಹುಟ್ಟುತ್ತೆ. ಏನಾದರೂ ಸಾಧಿಸಿ ಹೆಸರು ಉಳಿಸಬೇಕೆಂ ಛಲ ಬರುತ್ತೆ. ಅಂಥ ಛಲದಿಂದ ಇಂದು ‘ಅಮೃತ್ ಅಪಾರ್ಟ್ ಮೆಂಟ್ಸ್ ಸಿನಿಮಾ ಕಟ್ಟಿದವರೇ ಗುರುರಾಜ ಕುಲಕರ್ಣಿ.

ಲಾಸ್ಟ್ ಬಸ್ ಮತ್ತು ಆಕ್ಸಿಡೆಂಟ್ ಚಿತ್ರಗಳು ಎಲ್ಲರಿಗೂ ನೆನಪಿರುತ್ತೆ. ಯಾಕಂದ್ರೆ ಆ ಸಿನಿಮಾದ ಸಬ್ಜೆಕ್ಟ್ ಮನಸ್ಸಿಗೆ ನಾಟುವಂತಿದ್ದವು. ಆ ಸಿನಿಮಾಗಳ ನಿರ್ಮಾಣ ಮಾಡಿದ್ದಂತ ಗುರುರಾಜ ಕುಲಕರ್ಣಿ ಇದೀಗ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಮೃತ ಅಪಾರ್ಟ್ ಮೆಂಟ್ಸ್ ಓನರ್ ಆಗಿದ್ದಾರೆ. ಐಟಿ ಬಿಟಿ ಕಂಪನಿಯ ಅನುಭವ ಇವರ ಹೆಗಲಿಗಿದೆ.

ಅಮೃತ ಅಪಾರ್ಟ್ ಮೆಂಟ್ಸ್ ಟೈಟಲ್ ಕೇಳಿದಾಕ್ಷಣ ಸಾಕಷ್ಟು ಸಿನಿಮಂದಿಯ ಕ್ಯೂರಿಯಾಸಿಟಿ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಇದೊಂದು ಮರ್ಡರ್ ಮಿಸ್ಟ್ರಿ ಕಥೆ ಎಂದಾಗ ಕುಟುಂಬ ಸಮೇತ ನೋಡೋದು ಹೇಗೆ ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಆದ್ರೆ ನಿರ್ದೇಶಕ ಗುರುರಾಜ ಕುಲಕರ್ಣಿ ಈ ಎಲ್ಲಾ ಅನುಮಾನಗಳನ್ನ ಹೋಗಲಾಡಿಸಿದ್ದಾರೆ. ಪಕ್ಕಾ ಫ್ಯಾಮಿಲಿ ಸಮೇತ ಕೂತು ಯಾವುದೇ ನಡುಕವಿಲ್ಲದೆ ನೋಡುವಂತೆ ಸಿನಿಮಾಗೆ ಫೈನಲ್ ಟಚ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಸಿನಿಮಾಗಾಗಿ ಗುರುರಾಜ ಕುಲಕರ್ಣಿ ಅಷ್ಟು ಹೋಂ ವರ್ಕ್ ಮಾಡಿದ್ದಾರೆ. ವರ್ಷಗಳ ಕಾಲ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಎಲ್ಲಾ ಆಡಿಯನ್ಸ್ ಗೆ ಇಷ್ಟವಾಗುವ ರೀತಿ ನಿರ್ದೇಶನ ಮಾಡಿದ್ದಾರೆ. ಇಷ್ಟು ವರ್ಕ್ ಮಾಡಿರುವ ಕಾರಣ ನಿರ್ದೇಶಕ ಗುರುರಾಜ ಕುಲಕರ್ಣಿ, ನೋಡುಗರಿಗೆ ಎಲ್ಲಿಯೂ ಉತ್ಪ್ರೇಕ್ಷೆ ಅನ್ನಿಸದಂತೆ, ಕೃತಕ ಅನ್ನಿಸದಂತೆ ಕಲಾತ್ಮಕ ಚೌಕಟ್ಟಿನಲ್ಲಿ ಚಿತ್ರವನ್ನ ನಿರ್ದೇಶಿಸಿದ್ದಾರೆ ಅನ್ನೋ ಭರವಸೆ ಸಿಕ್ಕಿದೆ. ರಿಲೀಸ್ ಗೂ ರೆಡಿಯಾಗಿದೆ. ನವೆಂಬರ್ 26ಕ್ಕೆ ತೆರೆ ಮೇಲೆ ಬರಲಿದೆ.

ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಅದನ್ನು ನೋಡಿದವರಿಗೆ ಕಥೆಯ ಆಳ ಅಗಲ ತಿಳಿದೆ ಇರುತ್ತೆ. ಬೆಂಗಳೂರು ಅನ್ನೋದು ಸಣ್ಣ ಪುಟ್ಟ ಕೆರೆಯಲ್ಲ. ಇದೊಂದು ಸಮುದ್ರವೇ ಸರಿ. ಕೆಲಸ ಅರಸಿ ಬಂದವರಿಗೆ ಕೆಲಸ, ಬದುಕು ಕಟ್ಟಿಕೊಳ್ಳಬೇಕೆಂದವರಿಗೆ ಸುಂದರ ಬದುಕು ಕಟ್ಟಿಕೊಡುವ ಸಾಮರ್ಥ್ಯ ಈ ನಮ್ಮ ಬೆಂಗಳೂರಿಗಿದೆ. ಆದ್ರೆ ಆಗುವ ಸಣ್ಣ ಪುಟ್ಟ ಯಡವಟ್ಟುಗಳಿಂದ ಬೆಂಗಳೂರನ್ನ ನಿಂದಿಸುವವರಿಗೆ ಪಾಠವೂ ಈ ಸಿನಿಮಾದಲ್ಲಿದೆ. ಹಾಗೇ ಕೆಲ ಕಿರಾತಕರನ್ನು ಪೊಲೀಸರು ಅದೇಗೆ ಬಲೆ ಬೀಸಿ ಹಿಡಿಯುತ್ತಾರೆ ಅನ್ನೋದಕ್ಕೆ ಉತ್ತರವೂ ಇದೇ ಸಿನಿಮಾದಲ್ಲಿದೆ. ಬೆಂಗಳೂರನ್ನು ಇಷ್ಟಪಡುವ, ಬೆಂಗಳೂರಲ್ಲೇ ಬದುಕುತ್ತಿರುವವರು ಸಿನಿಮಾ ನೋಡುವಾಗ ಈ ಘಟನೆ ನಮ್ಮ ಅಕ್ಕಪಕ್ಕದಲ್ಲೆಲ್ಲೋ ನಡೆದಿತ್ತಲ್ವಾ ಅನ್ನೋ ಫೀಲ್ ಬರುವಂತೆ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ ಕಥೆ ಹೆಣೆದಿದ್ದಾರೆ.

ತಾರಕ್ ಪೊನ್ನಪ್ಪ ಮೊದಲ ಬಾರಿಗೆ ನಾಯಕರಾಗಿ ಎಂಟ್ರಿಯಾಗುತ್ತಿದ್ದಾರೆ. ಊರ್ವಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾನಸ ಜೋಶಿ, ಬಾಲಾಜಿ ಮನೋಹರ್, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

https://youtu.be/06KoEEKqFZg

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು