ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿರುವ ಗಂಧದ ಗುಡಿ ಸಾಕ್ಷ್ಯಚಿತ್ರದ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡಾಕ್ಯುಮೆಂಟರಿ ನೋಡಿ ಅಭಿಮಾನಿಗಳಷ್ಟೇ ಅಲ್ಲ,ಸಿನಿ ದಿಗ್ಗಜರು ಕೂಡ ಫಿದಾ ಆಗಿದ್ದಾರೆ. ಅಪ್ಪು ಇರಬೇಕಿತ್ತು ಎಂದು ಬೇಸರಿಸಿಕೊಂಡಿದ್ದಾರೆ.
ಗಂಧದ ಗುಡಿ ಬಗ್ಗೆ ಪುನೀತ್ ಪ್ರತಿ ಬಾರಿ ಹೇಳುವಾಗಲೂ ತುಂಬಾನೇ ಎಕ್ಸೈಟ್ ಆಗಿರುತ್ತಿದ್ದರು. ಅವರ ಕಣ್ಣಲ್ಲಿದ್ದ ಹೊಳಪಿಗೆ ಏನು ಹೇಳೋಣ. ನಮ್ಮ ಗಂಧದ ಗುಡಿಯನ್ನು ನಿಮ್ಮ ನೋಟದ ಮೂಲಕ ತೋರಿಸಿದ್ದೀರಿ ಅಪ್ಪು ಸರ್. ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ.
ಪ್ರಶಾಂತ್ ನೀಲ್ ಕೂಡ ಗಂಧದ ಗುಡಿಯನ್ನು ಹಾಡಿ ಹೊಗಳಿದ್ದು, ಅಪ್ಪು ಸರ್ ಕನಸು ಮತ್ತು ದೂರದೃಷ್ಟಿ ಜಾಗತಿಕ ಮಟ್ಟದಲ್ಲಿದೆ. ಅವರ ರೀತಿ ಇದೂ ಅಮೂಲ್ಯ. ಇಡೀ ತಂಡಕ್ಕೆ ಶುಭ ಹಾರೈಕೆಗಳು ಎಂದಿದ್ದಾರೆ.
ರಿಷಭ್ ಶೆಟ್ಟಿ, ಶರಣ್, ನಿಖಿಲ್ ಗೌಡ ಇನ್ನೂ ಹಲವು ಸಿನಿ ಕಲಾವಿದರು ಗಂಧದ ಗುಡಿ ಹೊಗಳಿದ್ದಾರೆ. ಐದು ಗಂಟೆಗಳ ಹಿಂದೆ ಅಪ್ಲೋಡ್ ಆದ ಟೀಸರ್ನ್ನು ಈಗಾಗಲೇ 918 ಲಕ್ಷ ಮಂದಿ ವೀಕ್ಷಿಸಿದ್ದಾರೆ.