ತೆರೆಯ ಮೇಲೆ ಪುನೀತ್ರನ್ನು ಕಂಡು ಖುಷಿಯಾಗಿದ್ದಾರೆ ಎಂದು ‘ಜೇಮ್ಸ್’ ನಿರ್ದೇಶಕ ಚೇತನ್ ಹೇಳಿದ್ದಾರೆ. ಅಪ್ಪು ಆಶೀರ್ವಾದ ಪಡೆಯಲು ಚಿತ್ರತಂಡ ಆಗಮಿಸಿತ್ತು. ನಂತರ ಮಾತನಾಡಿದ ಅವರು, ”ಎಲ್ಲಾ ಕಡೆ ತುಂಬಾ ಉತ್ತಮ ರೆಸ್ಪಾನ್ಸ್ ಸಿಗ್ತಿದೆ.
ಅಭಿಮಾನಿಗಳು ಅಪ್ಪು ತೆರೆ ಮೇಲೆ ನೋಡಿ ಖುಷಿಯಾಗಿದ್ದಾರೆ. ಆದರೂ ಸಿನಿಮಾ ಥಿಯೇಟರಿಂದ ಹೊರಗೆ ಬಂದರೆ ನೋವು ಕಾಡುತ್ತದೆ. ಅಶ್ವಿನಿಯವರು ಕೂಡ ಸಿನಿಮಾ ರಿಲೀಸ್ಗೆ ಶುಭಾಶಯ ಕೋರಿದ್ದಾರೆ. ಇಂದು ಅಪ್ಪು ವಾಸವಿದ್ದ ಮನೆಗೆ ಬಂದು ಅವರ ಆಶೀರ್ವಾದ ಪಡೆದಿದ್ದೇವೆ. ಇಲ್ಲಿಂದ ಪ್ರತಿ ಥಿಯೇಟರ್ ವಿಸಿಟ್ ಮಾಡುವ ಮೂಲಕ ಚಿತ್ರದ ಪ್ರಚಾರ ಶುರುಮಾಡುತ್ತೇವೆ. ಅಪ್ಪು ಇಲ್ಲದ ನೋವು ಕಾಡುತ್ತಿದೆ” ಎಂದಿದ್ದಾರೆ ಚೇತನ್.