ಸಾಂಡಲ್ ವುಡ್ : ಗಂಧದಗುಡಿಗೆ ಆಗಾಗ ಹೊಸಬರ ಎಂಟ್ರಿ ಆಗುತ್ತಲೆ ಇರುತ್ತೆ. ಅದರಂತೆ ಇದೀಗ ಅಂಜನ್ ಸಿನಿಮಾ ಮೂಲಕ ಮತ್ತೊಂದು ಹೊಸ ತಂಡ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡೋದಕ್ಕೆ ರೆಡಿಯಾಗಿದೆ. ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಶಾಸಕ ರವಿಸುಬ್ರಮಣ್ಯಂ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಟ್ರೇಲರ್ ಕಂಡು ಸಿನಿಮಾ ಮೇಲಿನ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.
ಇದೊಂದು ಕೌಟುಂಬಿಕ ಕಥೆಯನ್ನ ಹೊಂದಿದೆ. ಸಿನಿಮಾ ಹಳ್ಳಿಯಲ್ಲಿ ಆರಂಭವಾಗಿ ನಗರದೆಡೆಗೂ ಎಳೆದುಕೊಂಡು ಹೋಗುತ್ತೆ. ಸಿನಿಮಾದಲ್ಲಿ ನಟನಾಗಿರುವ ಅಂಜನ್ ಈ ಮುಂಚೆ ಜಿಮ್ ಟ್ರೇನರ್ ಆಗಿದ್ದವರು. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ರ್ಶನ್ ಅವರಿಗೆ ಜಿಮ್ ನಲ್ಲಿ ಟ್ರೇನಿಂಗ್ ಮಾಡುವಾಗ ನಟನಾಗಬೇಕೆಂಬ ಬಯಕೆ ಹುಟ್ಟಿದ್ದು, ಇವತ್ತು ನಾಯಕನಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅಂಜನ್, ರ್ಶನ್ ಸರ್ಗೆ ಜಿಮ್ ತರಭೇತಿದಾರನಾಗಿದ್ದರಿಂದಲೂ ನಟನಾಗಬೇಕೆಂಬ ಬಯಕೆ ಇತ್ತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಈಗ ನಾಯಕನಾಗಿದ್ದೇನೆ ಎಂದಿದ್ದಾರೆ.
ಚಿತ್ರಕ್ಕೆ ಆರ್ ಸಾಗರ್ ನರ್ದೇಶಕ. ಮಾಸ್, ಸೆಂಟಿಮೆಂಟ್ ಕಥೆಯನ್ನ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು, ಐದು ಫೈಟ್ ಗಳಿವೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕಿಯಾಗಿ ಜೋಷಿತಾ ಅಲೋಲ, ತಂಗಿ ಪಾತ್ರದಲ್ಲಿ ವಿಭೀಷ ನಟಿಸಿದ್ದು, ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ಗೋಪಿ ಕಲಾಕಾರ್ ಸಂಗೀತ ಸಂಯೋಜನೆ, ಗುರುದತ್ ಮುಸೂರಿ ಕ್ಯಾಮೆರಾ ರ್ಕ್, ಕೋಟೆರಾಜು ಸಾಹಸ ಚಿತ್ರಕ್ಕಿದೆ.