ಬೆಂಗಳೂರು: ದರ್ಶನ್ ಹೊಸ ಸಿನಿಮಾ ‘ಕಾಟೇರ’ ಶೂಟಿಂಗ್ ನಡೆಯುತ್ತಿದೆ. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗ ಸ್ವತ: ದರ್ಶನ್ ಕಥೆಯ ಬಗೆ ಹೇಳಿದ್ದು, ಊಳುವವನೇ ಹೊಲದೊಡೆಯ’ ಅನ್ನೋ ಕಾಯ್ದೆ ಬಗ್ಗೆ ಚಿತ್ರ ಕಥೆ ಹೊಂದಿರುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ದರ್ಶನ್ ಪುಟ್ಟಣ್ಣಯ್ಯ ಪ್ರಚಾರದ ವೇಳೆ ನಟ ದರ್ಶನ್ ಈ ವಿಚಾರ ತಿಳಿಸಿದ್ದಾರೆ.
ಚಿತ್ರದಲ್ಲಿ ದರ್ಶನ್ ಲುಂಗಿ ತೊಟ್ಟು 80ರ ದಶಕದ ಹೀರೊಗಳಂತೆ ಕಾಣುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಚಿತ್ರದ ಬಗ್ಗೆ ಸ್ವತಃ ದರ್ಶನ್ ಚುನಾವಣಾ ಪ್ರಚಾರದ ವೇಳೆ ತಿಳಿಸಿದ್ದಾರೆ.
1965ರಿಂದ 1979ರವರೆಗೆ ನಡೆದ ನಡೆದ ಊಳುವವನೆ ಹೊಲದೊಡೆಯ ಎಂಬ ಹೋರಾಟದ ಕುರಿತು ಚಿತ್ರದ ಹೂರಣವಿದೆ. ಸಿನಿಮಾ ಟೀಸರ್ ಅವರನ್ನು ದರ್ಶನ್ ಪುಟ್ಟಣ್ಣಯ್ಯ ರಿಲೀಸ್ ಮಾಡಿದ್ದರು. ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಮತನೀಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ.