News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ‘ಹರ್ ಘರ್ ತಿರಂಗಾ’ ಗಾಗಿ ಭರದಿಂದ ಸಾಗಿದ ರಾಷ್ಟ್ರಧ್ವಜ ಸಿದ್ದ ಪಡಿಸುವ ಕಾರ್ಯ

Manglore
Photo Credit : News Kannada

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 11 ರಿಂದ 17 ರವರೆಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ರಾಷ್ಟ್ರಧ್ವಜ ಹೊಲಿದು ಸಿದ್ದಪಡಿಸಿ ನೀಡುವಂತೆ ಜಿಲ್ಲೆಯ ಸಂಜೀವಿನಿ ಗ್ರಾಮಪಂಚಾಯತ್ ಮತ್ತು ಅದರ ಒಕ್ಕೂಟಗಳಿಗೆ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರೂಡ್ ಸೆಟ್ ನಲ್ಲಿ ಮಹಿಳಾ ಸ್ವ ಸಹಾಯ ಸಂಘದ 62 ಸದಸ್ಯರಿಗೆ ಧ್ವಜ ಸಂಹಿತೆಯನ್ನು ತಿಳಿಸಿಕೊಟ್ಟು, ರಾಷ್ಟ್ರಧ್ವಜವನ್ನು ಹೊಲಿಯುವ ತರಬೇತಿ ಕಾರ್ಯಕ್ರಮವನ್ನು ಜುಲೈ 22ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಹೊಲಿಗೆಯನ್ನು ತಿಳಿದಿರುವ 62 ಮಹಿಳೆಯರಿಗೆ ಧ್ವಜ ಸಿದ್ದಪಡಿಸಲು ಉಡುಪಿಯಿಂದ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗಿತ್ತು. ಅವರು ಮೊದಲಿಗೆ ಧ್ವಜ ಸಂಹಿತೆಯನ್ನು ತಿಳಿಸಿ, ಧ್ವಜವನ್ನು ಸಿದ್ಧಪಡಿಸುವ ತರಬೇತಿ ನೀಡಿದರು.

ರಾಷ್ಟ್ರಧ್ವಜ ಸಿದ್ಧಪಡಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಜಿಲ್ಲೆಯಿಂದಲೇ ಖರೀದಿಸಿ ನೀಡಲಾಗಿತ್ತು. ಧ್ವಜವನ್ನು ಹೊಲಿದ ನಂತರ ಸ್ಕ್ರಿನ್ ಪ್ರಿಂಟ್ ಮೂಲಕ ಮಧ್ಯ ಭಾಗದಲ್ಲಿ ಅಶೋಕ ಚಕ್ರವನ್ನು ಮುದ್ರಿಸಲಾಗುವುದು.

ಇಲ್ಲಿ ತರಬೇತಿ ಪಡೆದ ಮಹಿಳೆಯರು, ವಿವಿಧ ಗ್ರಾಮ ಪಂಚಾಯತ್ ಗಳು ಹಾಗೂ ಮನೆಗಳಲ್ಲಿಯೂ ಧ್ವಜಗಳನ್ನು ಹೊಲಿದು, ಸಿದ್ಧಪಡಿಸಿ ಸಂಜೀವಿನಿ ಒಕ್ಕೂಟಗಳ ಮೂಲಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ತಲುಪಿಸಲಿದ್ದಾರೆ.

ಸುಳ್ಯ ತಾಲೂಕಿನ ಆರಂತೋಡು ಗ್ರಾಮ ಪಂಚಾಯಿತಲ್ಲೇ ಈಗಾಗಲೇ 1,500 ದ್ವಜ ಸಿದ್ಧಪಡಿಸಲು ಆದೇಶ ನೀಡಲಾಗಿದ್ದು ಅದರಲ್ಲಿ 150 ಈಗಾಗಲೇ ಸಿದ್ಧಗೊಂಡಿದೆ, ಸುಳ್ಯದ ಜಾಲಸೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲೂ ಕೂಡ ಧ್ವಜ ಸಿದ್ಧಪಡಿಸುವ ಕಾರ್ಯ ಬರದಿಂದ ಸಾಗಿದೆ.

2021ರಲ್ಲಿ ತರಲಾದ ತಿದ್ದುಪಡಿ ಪ್ರಕಾರ ರಾಷ್ಟ್ರ ಧ್ವಜವನ್ನು ಹತ್ತಿ, ರೇಷ್ಮೆ ಹಾಗೂ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜವನ್ನು ಸಿದ್ಧಪಡಿಸಬಹುದಾಗಿದೆ. ಧ್ವಜವನ್ನು ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ವಸ್ತುವನ್ನು ಮಂಗಳೂರಿನ ಸೌರಾಷ್ಟ್ರ ಹಾಗೂ ಸ್ಕೂಲ್ ಬುಕ್ ಕಂಪೆನಿಗಳಿಂದ ಖರೀದಿಸಲಾಗುತ್ತಿದೆ ಹಾಗೂ ಬೆಂಗಳೂರಿನಲ್ಲಿಯೂ ಖರೀದಿಸಿ ತರಲಾಗುತ್ತಿದೆ, ಇದೀಗ ಸಿದ್ದ ಪಡಿಸುತ್ತಿರುವ ಹತ್ತಿ ಬಟ್ಟೆಯ ಧ್ವಜಕ್ಕೆ 60 ರೂಪಾಯಿ ಹಾಗೂ ಪಾಲಿಸ್ಟರ್ ಧ್ವಜಕ್ಕೆ 35 ರೂ.ಗಳಾಗಲಿದ್ದು, ಅವುಗಳನ್ನು 30×20 ಹಾಗೂ 16×24 ಹಾಗೂ 6 x9 ಇಂಚುಗಳ ಅಳತೆಯಲ್ಲಿ ಹೊಲಿಯಲಾಗುತ್ತಿದೆ ಎಂದು ಎನ್ ಆರ್ ಎಲ್ ಎಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ತಿಳಿಸುತ್ತಾರೆ.

ರೂಡ್ ಸೆಟ್ ನಿರ್ದೇಶಕರಾದ ಸುರೇಶ್ ಕೆ.ಎಂ., ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕ ಜಯಾನಂದ್ ಹಾಗೂ ಸಂಪನ್ಮೂಲ ವ್ಯಕ್ತಿ ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು