News Karnataka Kannada
Sunday, May 19 2024

ಸತ್ಪಥದೆಡೆಗೆ…

Photo Credit :

ಸತ್ಪಥದೆಡೆಗೆ...

ಶಾಂತಿ ಹಾಗೂ ತ್ಯಾಗಕ್ಕೆ ಸ್ವರೂಪವಾದ ಬಾಹುಬಲಿಯ ಬಗ್ಗೆ ಜೈನರಲ್ಲಿ ಹಲವಾರು ನಂಬಿಕೆಗಳು ಮತ್ತು ಕಥೆಗಳಿವೆ. ಆದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕಥೆ ಬಾಹುಬಲಿ ಹಾಗೂ ಅವನ ಸಹೋದರ ಭರತನ ನಡುವೆ ನಡೆದ ಯುದ್ದದ ಬಗೆಗಿನದ್ದು. ಭರತನು ತನ್ನ ಬಲಕ್ಕೆ ಸರಿಸಾಟಿ ಯಾರೂ ಇಲ್ಲವೆಂದು ಬೀಗುತ್ತಿದ್ದಾಗ ಜನರೆಲ್ಲರು ಅವನ ಸಹೋದರನಾದ ಬಾಹುಬಲಿಯತ್ತ ಕೈತೋರಿಸಿದರು. ಅದನ್ನು ಸಹಿಸಲಾಗದ ಭರತ ಬಾಹುಬಲಿಯನ್ನು ಯುದ್ದಕ್ಕೆ ಆಹ್ವಾನಿಸಿದನು. ಹೀಗೆ ಪ್ರಾರಂಭವಾದ ಕಾಳಗ ಭರತನ ಅಹಂಕಾರಕ್ಕೆ ಮುಕ್ತಿ ಹಾಗೂ ಬಾಹುಬಲಿಯ ವಿರಕ್ತ ಪ್ರವೃತ್ತಿಗೆ ನಾಂದಿಯಾಯಿತು.

ಈ ಕಥೆ ಎಷ್ಟರ ಮಟ್ಟಿಗೆ ಸತ್ಯ-ಸುಳ್ಳು ಎಂಬುದಕ್ಕಿಂತ ಇದರಲ್ಲಿನ ಸಾರಂಶ ಮುಖ್ಯವಾಗುತ್ತದೆ. ಏಕೆಂದರೆ, ಒಂದು ಘÀಟನೆಯನ್ನೊಳಗೊಂಡ ಈ ಕಥೆ ಹಲವಾರು ನೀತಿಯನ್ನು ಹೇಳುತ್ತದೆ. ನಾನು! ಎಂಬ ಭಾವ ಯಾರಲ್ಲಿ ಮೂಡುತ್ತದೆಯೋ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ಈ ಕಥೆಯು ಸಂಬಂಧಗಳ ಬೆಲೆ, ಶಾಂತಿ, ತ್ಯಾಗ ಇವುಗಳನ್ನು ಬಿಂಬಿಸುತ್ತದೆ. ಇದರಲ್ಲಿ ಬರುವ ಇನ್ನೊಂದು ಮುಖ್ಯ ಅಂಶ ಬದಲಾವಣೆ. ತಮ್ಮಲ್ಲಿರುವ ಕೆಟ್ಟ ಗುಣಗಳನ್ನು ನಾಶಪಡಿಸಿ ಸತ್ಪಥದತ್ತ ಸಾಗುವುದು.

ಎಂದೆಂದಿಗೂ ಎಲ್ಲರಲ್ಲೂ ಇರಲೇಬೇಕಾದ ಮೌಲ್ಯಯುತವಾದ ಅಂಶಗಳನ್ನು ಈ ಒಂದು ಕಥೆಯಲ್ಲೇ ಹಿಂದಿನವರು ಕಟ್ಟಿಕೊಟ್ಟಿದ್ದಾರೆ. ಅಂದರೆ ಶಾಂತಿ, ನಿಮ್ಮದಿಯ ಬಾಳ್ವೆ ನಡೆಸಲು ಹೆಚ್ಚು ಹಣ ಇರಬೇಕೆಂಬುದು ಮುಖ್ಯವಲ್ಲ. ಬದಲಾಗಿ ಒಳ್ಳೆಯ ಗುಣ ಹಾಗು ನಡತೆ ಇರಬೇಕು ಎಂಬುದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು