News Karnataka Kannada
Monday, April 29 2024
ವಿಶೇಷ

ಮಂಗಳೂರು: ಸಾರ್ವಜನಿಕ ಉಪಯೋಗಕ್ಕೆ ಬಾರದ ಮಸಣವಾಗಿದೆ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿ

Mangaluru: The Hindu burial ground at Chembugudda has become a publicly unusable place.
Photo Credit : News Kannada

ಮಂಗಳೂರು: ಇನ್ಫೋಸಿಸ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ ಹಿಂದೂ ರುದ್ರ ಭೂಮಿಯಲ್ಲಿ ನಿರ್ಮಿಸಲಾದ ವಿದ್ಯುತ್ ಚಿತಾಗಾರ ಲೋಕಾರ್ಪಣೆಗೊಂಡು 5ತಿಂಗಳಾದರೂ ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಬಾರದ ಮಸಣದ ಹೂವಾಗಿದೆ.

ಚೆಂಬುಗುಡ್ಡೆ ಹಿಂದೂ ರುದ್ರ ಭೂಮಿಯಲ್ಲಿ ಸುಮಾರು ೧.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ವಿದ್ಯುತ್ ಚಿತಾಗಾರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಫೆಬ್ರವರಿ ಹನ್ನೆರಡ ರಂದು ಸ್ಥಳೀಯ ಶಾಸಕ ಯು ಟಿ ಖಾದರ್ ಅವರು ಲೋಕಾರ್ಪಣೆಗೊಳಿಸಿದರು.

ಈ ರುದ್ರಭೂಮಿ ವಿದ್ಯುತ್ ಚಿತಾಗಾರ ನಿರ್ಮಿಸಲು ಆರಂಭದಲ್ಲಿ ಸ್ಥಳೀಯರ ವಿರುದ್ಧ ಕೇಳಿಬಂದಿತ್ತು ರುದ್ರಭೂಮಿಗೆ ಕಾಯ್ದಿರಿಸಲಾದ ಪಕ್ಕದ ಜಮೀನಿನಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದು ಅವರನ್ನು ಮನವೊಲಿಸಿ ಉದ್ದೇಶಿತ ಜಾಗದಲ್ಲಿ 3ಸಾವಿರ ಚದರ ಅಡಿ ವಿಸ್ತೀರ್ಣದ ನೂತನ ಕಟ್ಟಡದೊಳಗೆ ಸುಸಜ್ಜಿತ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗಿತ್ತು.

ಇನ್ಫೋಸಿಸ್ ಸಂಸ್ಥೆಯು ನಿರ್ಮಿಸಿದ ನೂತನ ವಿದ್ಯುತ್ ಚಿತಾಗಾರ ಉಳ್ಳಾಲ ನಗರಸಭೆಗೆ ಹಸ್ತಾಂತರಗೊಂಡಿದ್ದು ಚಿತಾಗಾರ ನಿರ್ಮಿಸಲು ಇನ್ನೂ ಆಪರೇಟರನ್ನು ನೇಮಿಸಿಲ್ಲ , ರುದ್ರಭೂಮಿಯಲ್ಲಿ ಈಗಿರುವ ಸೌದೆ ಚಿತಾಗಾರದಲ್ಲಿ ಶವ ಸುಡಲು ಸುಮಾರು 3ಸಾವಿರದ ಐನೂರು ರೂಪಾಯಿಗಳನ್ನು ತೆರೆಬೇಕಾಗುತ್ತದೆ . ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ನಡೆಸಲು ಹೆಚ್ಚೆಂದರೆ 1ಸಾವಿರ₹ವೆಚ್ಚ ತಗುಲಲಿದ್ದು ಇದರಿಂದ ಸಮಾಜದ ತೀರ ಅಶಕ್ತ ವರ್ಗದ ಜನರಿಗೆ ಸಹಕಾರಿಯಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು