ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ನಿವಾಸಿ ಚಂದ್ರ ಕಾರ್ವಿ ಅವರು ಕಳೆದ 13 ವರ್ಷಗಳಿಂದ ಪಂಜರು ಮೀನು ಕೃಷಿಯನ್ನು ಮಾಡುವುದರ ಮುಖೇನ ಜೀವನವನ್ನು ಕಂಡು ಕೊಂಡಿದ್ದಾರೆ.
ಪಂಜರು ಮೀನು ಕೃಷಿಯಲ್ಲಿ ಕುರುಡಿ ಮೀನು ಮತ್ತು ಕೆಂಬೇರಿ ಮೀನನ್ನು ಸಾಕಿ, ಬೆಳೆದ ಮೀನುಗಳನ್ನು ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಮೀನಿಗೆ ಬಾರಿ ಬೇಡಿಕೆ ಕೂಡ ಇದೆ,ಹೊರ ರಾಜ್ಯಗಳಿಗೆ ಮೀನನ್ನು ಮಾರಾಟ ಮಾಡುವುದರ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಸ್ವ ಉದ್ಯೋಗ ಮಾದರಿಯ ಮೀನಿನ ಕೃಷಿಯನ್ನು ಮಾಡುವುದರ ಮೂಲಕ ಚಂದ್ರ ಖಾರ್ವಿ ಅವರು ಇತರರಿಗೆ ಮಾದರಿಯಾಗಿದ್ದಾರೆ. ಬೇರೆಯವರಿಗೆ ಮೀನು ಕೃಷಿ ಮಾಡಲು ತರಬೇತಿಯನ್ನು ಕೂಡ ನೀಡುತ್ತಾರೆ.