News Karnataka Kannada
Monday, April 29 2024
ವಿಶೇಷ

ಸಿಹಿ ಗೆಣಸಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the sweet potato crop
Photo Credit : Pixabay

ಸಾಮಾನ್ಯವಾಗಿ ಸಿಹಿಗೆಣಸು ಬೆಳೆಯನ್ನು ಅದರ ಸಿಹಿ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ ಮುಖ್ಯವಾಗಿ ಸಿಹಿ ಗೆಣಸನ್ನು ಬೇಯಿಸಿದ ಅಥವಾ ಬೆಂಕಿಯಲ್ಲಿ ಸುಟ್ಟ ನಂತರ ಆಹಾರವಾಗಿ ಬಳಸಲು ಜನ ಇಷ್ಟಪಡುತ್ತಾರೆ. ಸಿಹಿ ಆಲೂಗೆಡ್ಡೆ ಅಥವಾ ಸಿಹಿಗೆಣಸನ್ನು ಉಷ್ಣವಲಯದ ಮತ್ತು ಉಪೋಷ್ಣವಲಯದ ಇಷ್ಟಯುಕ್ತ ಆಹಾರವಾಗಿ ಬಳಸಲಾಗುತ್ತದೆ. ಇದರ ಜೊತೆಗೆ ಇದರಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಸಿಹಿ ಗೆಣಸನ್ನು ಜಾನುವಾರುಗಳಿಗೂ ಆಹಾರವಾಗಿ ಬಳಸಲಾಗುತ್ತದೆ.

ಭಾರತದಲ್ಲಿ ಸಿಹಿಗೆಣಸು ಬೆಳೆಸುವ ಪ್ರಮುಖ ರಾಜ್ಯಗಳು: ಒರಿಸ್ಸಾ, ಬಿಹಾರ್, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮತ್ತು ಮಹಾರಾಷ್ಟ್ರ.

ಸಿಹಿ ಗೆಣಸು ಬೇಸಾಯಕ್ಕೆ ಅಗತ್ಯವಿರುವ ಹವಾಮಾನ: ಸಿಹಿಗೆಣಸು ಒಬ್ಬ ಬೆಳೆಯನ್ನ ಬೆಚ್ಚಗಿನ ಉಷ್ಣವಲಯದ ಮತ್ತು ಉಪೋಷ್ಣವಲಯದ ಮುಕ್ತ ಪ್ರದೇಶಗಳಲ್ಲಿ 21 ಡಿಗ್ರಿ ಸೆಲ್ಸಿಯಸ್ ನಿಂದ 26 ಡಿಗ್ರಿ ಸೆಲ್ಸಿಯಸ್ ವರೆಗೆ ಆದರ್ಶ ತಾಪಮಾನದೊಂದಿಗೆ ಬೆಳೆಸಲಾಗುತ್ತದೆ. ಹಾಗೂ ಅತ್ಯುತ್ತಮ ಉತ್ಪಾದನೆಗೆ 75ರಿಂದ 150 ಸೆಂಟಿಮೀಟರ್ ನಷ್ಟು ಮಳೆಯ ಅಗತ್ಯವಿರುತ್ತದೆ.

ಭಾರಿ ಮಳೆಯು ಬೆಳೆಗೆ ಹಾನಿಯನ್ನು ಉಂಟುಮಾಡಬಹುದು. ಈ ಬೆಳಗ್ಗೆ ಕನಿಷ್ಠ ಐದು ತಿಂಗಳ ಕಾಲ ಸಾಕಷ್ಟು ಬಿಸಿಲು ಬೇಕಾಗುತ್ತದೆ ಇದು ಬರ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬಲ್ಲದು ಆದರೆ ನೀರಿನ ನಿಶ್ಚಲತೆಯನ್ನು 10 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದಲ್ಲಿ ಬದುಕುವುದು ಅಸಾಧ್ಯ.

ಮಣ್ಣಿನ ಅವಶ್ಯಕತೆ : ಉತ್ತಮವಾದ ಸಿಹಿ ಗೆಣಸಿನ ಉತ್ಪಾದನೆಗೆ ಜೇಡಿ ಮಣ್ಣಿನ ಜೊತೆಗೆ ಹ್ಯೂಮಸ್ ನಿಂದ ಸಮೃದ್ಧವಾಗಿರುವ ಚೆನ್ನಾಗಿ ಬರೆದು ಮಾಡಿದ ಮರಳು ಮಿಶ್ರಿತ ಲೋನ್ ಮಣ್ಣಿನ ಅಗತ್ಯವಿದೆ.

ನೀರಾವರಿ ಅವಶ್ಯಕತೆ : ಸಿಹಿಣಸಿನ ಬೆಳೆಗೆ ಅತಿಯಾದ ನೀರಾವರಿಯನ್ನು ತಪ್ಪಿಸುವುದು ಬಹಳ ಉತ್ತಮ. ಖಾರಿಫ್ ಋತುವಿನಲ್ಲಿ ಸೀಗೆಣಸು ಬೆಳಗೆ ಕಡಿಮೆ ನೀರಾವರಿ ಅವಶ್ಯಕತೆ ಇರುತ್ತದೆ. ಬಿಸಿ ಶುಷ್ಕ ಋತುವಿನಲ್ಲಿ ಹೆಚ್ಚಿನ ಉತ್ಪಾದನೆಗೆ 8 ರಿಂದ 10 ದಿನಗಳ ಮಧ್ಯಂತರದಲ್ಲಿ ಹತ್ತರಿಂದ ಹನ್ನೆರಡು ನೀರಾವರಿ ಅಗತ್ಯವಿರುತ್ತದೆ. ಅದಾಗಿಯೂ ನೆಟ್ಟ ನಲ್ವತ್ತರಿಂದ 45 ದಿನಗಳ ನಂತರ ಮಣ್ಣಿನಲ್ಲಿ ಸಾಕಷ್ಟು ನೀರಿನ ಅಂಶ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.

ಸಿಹಿಣಸಿನ ಆರೋಗ್ಯ ಪ್ರಯೋಜನಗಳು: ಸಿಹಿ ಗೆಣಸು ಅತ್ಯುತ್ತಮ ನಾರಿನ ಮೂಲವಾಗಿದ್ದು ಅದರ ಕೆಲವು ಆರೋಗ್ಯ ಪ್ರಯೋಜನಗಳು ಹೀಗಿವೆ

# ಸಿಹಿಗೆಣಸು ಹೃದಯಕ್ಕೆ ತುಂಬಾ ಉತ್ತಮ

# ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

# ಸಿಹಿ ಗೆಣಸು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ

# ಸಿಹಿಗಣಸು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಉರಿಯುತದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

# ಜೀರ್ಣ ಕ್ರಿಯೆಗೆ ಉತ್ತಮ

# ಈಗೆಣಸು ಕ್ಯಾನ್ಸರನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

# ಮೂತ್ರಪಿಂಡ ತೊಂದರೆ ಇರುವ ರೋಗಿಗಳು ಸಿಹಿಗಣಸನ್ನು ತಿನ್ನುವುದು ತಪ್ಪಿಸಬೇಕು ಏಕೆಂದರೆ ಅದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ರೂಪಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು