ಭತ್ತದ ಬೇಸಾಯ: ಹಳ್ಳಿಗಳಲ್ಲಿನ ಮುಖ್ಯ ಜೀವನೋಪಾಯ

ಅಕ್ಕಿ ನಮ್ಮ ದಕ್ಷಿಣ ಭಾರತದ ಪ್ರಮುಖ ಆಹಾರಗಳಲ್ಲಿ ಮುಖ್ಯವಾದದ್ದು. ಪ್ರತಿದಿನ ಊಟ ಮಾಡದೆ ನಮ್ಮ ದಿನ ಪೂರ್ತಿಯಾಗುವುದಿಲ್ಲ. ಈ ರೀತಿಯ ಆಹಾರ ಅಭ್ಯಾಸಗಳು ನಮ್ಮ ದಿನನಿತ್ಯದ ಜೀವನದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ದಿನ ನಿತ್ಯದ ಆಹಾರದ ಒಂದು ಭಾಗವೇ ಆಗಿರುವ ಅಕ್ಕಿಯನ್ನು ಬೆಳೆಸುವುದರಿಂದ ಹಿಡಿದು ನಮ್ಮ ತಟ್ಟೆ ಸೇರುವವವರೆಗೂ ಅನೇಕ ವಿಧಾನಗಳಿರುತ್ತವೆ.

ಏಶಿಯನ್ ದೇಶಗಳಾದ ಭಾರತ, ಚೀನಾ, ಜಪಾನ್, ಥೈಲ್ಯಾಂಡ್, ಇಂಡೋನೇಶಿಯಾಗಳಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇಡೀ ಪ್ರಪಂಚದಲ್ಲಿ ಚೀನಾವು ಭತ್ತದ ಬೆಳೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಭಾತವು ಎರಡನೇ ಸ್ಥಾನದಲ್ಲಿದೆ.

ಭತ್ತದಯ ಬೇಸಾಯವು ತುಂಬಾ ಶ್ರಮವನ್ನು ಕೇಳುವ ಕೆಲಸವಾಗಿದ್ದು, ಉತ್ತಮ ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಮಾತ್ರವೆ ಇವುಗಳನ್ನು ಬೆಳೆಯಲು ಸಾಧ್ಯ. ಇದು ಉಷ್ಣವಯದ ಹವಾಮಾನ ಬೆಳೆಯಾಗಿದ್ದು ಸಮುದ್ರಮಟ್ಟದಿಂದ ೩೦೦ ಮೀಟರ್ ಎತ್ತರದ ವರೆಗೆ ಬೆಳೆಯಬಹುದಾಗಿದೆ. ೬ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯಗಳು ಉದ್ದವಾದ ಮತ್ತು ಮೊನಚಾದ ಎಲೆಯನ್ನು ಹೊಂದಿರುತ್ತವೆ. ಹೆಚ್ಚಿನ ತಾಪಮಾನ, ಆರ್ದ್ರತೆ ಹಾಗೂ ನಿರಾವರಿ ಸೌಲಭ್ಯಗಳೊಂದಿಗೆ ಸಾಕಷ್ಟು ಮಳೆಯು ಭತ್ತದ ಕೃಷಿಯ ಮೂಲ ಅವಶ್ಯಕತೆಯಾಗಿದೆ.

ಭತ್ತ ಬೆಳೆಯಲು ಉತ್ತಮ ಕಾಲ

ಭತ್ತವು ವಿವಿಧ ಹವಾಮಾನಗಳಲ್ಲಿ ಬೆಳೆಯುವುದರಿಂದ ಇದನ್ನು ವಿವಿಧ ಋತುಗಳಲ್ಲಿ ಬೆಳೆಸಬಹುದಾಗಿದೆ. ಮೇ ನಿಂದ ನವೆಂಬರ್ ಅವಧಿಯಲ್ಲಿ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ೨-೩ ಬೆಳೆಗಳನ್ನು ಬೆಳೆಸಲಾಗುತ್ತದೆ.

ಭತ್ತದ ಕೃಷಿಗೆ ಉತ್ತಮ ಮಣ್ಣು ಯಾವುದು?

ಕಪ್ಪು ಮಣ್ಣು, ಕೆಂಪು ಮಣ್ಣು, ಜೇಡಿ ಮಣ್ಣುಗಳು ಸೂಕ್ತವಾಗಿರುತ್ತವೆ.

ಬೀಜದಿಂದ ಹಿಡಿದು ಅದು ಅಕ್ಕಿಯಾಗುವವರೆಗು ಕೆಲವು ವಿಧಾನಗಳು ಇಲ್ಲಿ ಮುಖ್ಯವಾಗುತ್ತದೆ ಅವುಗಳೆಂದರೆ

ಭೂಮಿಯನ್ನು ಹದಗೊಳಿಸುವುದು : ಗದ್ದೆಯಲ್ಲಿ ಬೆಳೆದಂತಹ ಕಳೆಯನ್ನು ಮಣ್ಣಿನಲ್ಲಿ ಸೇರಿಸಲು ಒಂದು ಸುತ್ತಿನ ಟ್ರಾಕ್ಟರ್ ಅನ್ನು ಓಡಿಸಲಾಗುತ್ತದೆ. ಮತ್ತೆ ಒಂದು ವಾರಗಳ ನಂತರ ಮಣ್ಣನ್ನು ಹದಗೊಳಿಸಲು ಟ್ರಾಕ್ಟರ್ ಮೂಲಕ ಮತ್ತೊಮ್ಮೆ ಗದ್ದೆಗಳಲ್ಲಿ ಚಲಾಯಿಸಲಾಗುತ್ತದೆ ಇದರಿಂದ ಮಣ್ಣು ಹದಗೊಳ್ಳುತ್ತದೆ.

ಭತ್ತದ ಸಸಿಗಳ ನಾಟಿ: ಮೊಳಕೆ ಬರಿಸಲು ಭತ್ತದ ಬೀಜಗಳನ್ನು ಸೆಗಣಿ ನೀರಿನಲ್ಲಿ ಚೆನ್ನಾಗಿ ಬೆರೆಸಿ ೨ ದಿನಗಳಕಾಲ ಗೋಣಿಚೀಲದಲ್ಲಿ ಕಟ್ಟಿಟ್ಟು ಮೊಳಕೆ ಬರಿಸಲು ಇಡಬೇಕು. ೨ ದಿನಗಳ ಬಳಿಕ ಬೀಜಗಳು ನಾಟಿ ಮಾಡಲು ಸಿದ್ದವಾಗುತ್ತವೆ. ಬೀಜಗಳನ್ನು ಗದ್ದೆಗಳಲ್ಲಿ ನಾಟಿ ಮಾಡಿದ ನಂತರ ಅದಕ್ಕೆ ಬೇಕಾದಷ್ಟು ನೀರನ್ನು ಒದಗಿಸಬೇಕಾಗುತ್ತದೆ. ನೀರು ಹೆಚ್ಚಾದಲ್ಲಿ ಬೀಜಗಳು ತೇಲುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಕೃಷಿಕರು ತುಂಬಾ ಜಾಗರೂಕರಾಗಿರಬೇಕು.

ಭತ್ತದ ಕಟಾವು : ಇದು ಭತ್ತದ ಕೊನೆಹ ಹಂತ ಇಲ್ಲಿ ಭತ್ತದ ಬೀಜಗಳನ್ನು ನಾಟಿ ಮಾಡಿದ ಸುಮಾರು ೯೦ ದಿನಗಳು (೩ತಿಂಗಳು)ಗಳಲ್ಲಿ ಭತ್ತವು ಕಟಾವಿಗೆ ತಯಾರಾಗುತ್ತದೆ.

ಹಳೆಯ ಕಾಲದಲ್ಲಿ ಮಾನವ ಶಕ್ತಿಯನ್ನು ಬಳಸಿಕೊಂಡು ಭತ್ತದ ಕಟಾವು ಮಾಡಲಾಗುತಿತ್ತು ಆದರೆ ಈಗ ಭತ್ತ ಕೊಯ್ಯಲ್ಲು ಬಹಳಷ್ಟು ಬಗೆಯ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲಿಂದ ಮುಂದೆ ಭತ್ತವನ್ನು ಅಕ್ಕಿ ಮಾಡುವ ಮಿಲ್ಲಿಗೆ ಒಯ್ದು ಅಲ್ಲಿ ಅಕ್ಕಿಯನ್ನು ತಯಾರಿಸಲಾಗುತ್ತದೆ.

Ashika S

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

18 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

42 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

1 hour ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

1 hour ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

2 hours ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago