ರಾಷ್ಟ್ರಕವಿ ಕುವೆಂಪು ಅವರ ಬೃಹತ್ ಕಾದಂಬರಿ ’ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದು ಕವಿ ಕುವೆಂಪು ಅವರ ಮೊದಲ ಕಾದಂಬರಿ.
ಚಂದ್ರೇಗೌಡ ರ ಮೂರನೇ ಹೆಂಡತಿಯಾಗಿ ಸಿರೂಡಿಕೆಯಾದ ಸುಬ್ಬಮ್ಮ ಎಂಬ ಬಡ ಕುಟುಂಬದ ಎಳೆಯ ಪ್ರಾಯದ ಹೆಣ್ಣು ಕಾನೂರು ಗೌಡರ ಮನೆ ಸೇರಿ ಹೆಗ್ಗಡಿತಿಯಾಗಿ ಬದಲಾಗುವ ವಿಷಯವೇ ಕಥೆಯಲ್ಲಿ ಪ್ರಮುಖವಾದದ್ದು. ಇದರಲ್ಲಿ ಹೆಣ್ಣೇ ಪ್ರಮುಖ ಪಾತ್ರಧಾರಿ ಕಾನೂರು ಸುಬ್ಬಮ್ಮ ಕುಸಂಸ್ಕೃತಿ ಯ ಹೆಣ್ಣಾಗಿ ಎಲ್ಲರ ಬದುಕಿನಲ್ಲಿ ವಿಷವಾಗಿ ಬದಲಾಗುತ್ತಾಳೆ.
ಹೆಣ್ಣು ಅನುಭವಿಸುವ ಕಷ್ಟಗಳ ಜೊತೆಗೆ ಹೆಣ್ಣಿನಲ್ಲಿರಬಹುದಾದ ಎಲ್ಲಾ ದುರ್ಗುಣಗಳನ್ನು ಇದು ವಿವರಿಸುತ್ತದೆ
ತೀರ್ಥಹಳ್ಳಿ, ಕಾನೂರು, ಮುತ್ತಳ್ಳಿ, ಕೆಳ ಕಾನೂರು, ಸೀತೆಮನೆ, ಅಗ್ರಹಾರ,ಇತ್ಯಾದಿ ಪ್ರದೇಶಗಳು ಚಂದ್ರಯ್ಯ ಗೌಡರ ಅಹಂ ಮತ್ತು ಕೋಪ, ಹೂವಯ್ಯ ಮತ್ತು ಸೀತೆಯ ಪ್ರೀತಿ, ರಾಮಯ್ಯನ ಸ್ವಾರ್ಥ ಹಾಗೂ ಇತರ ಪಾತ್ರ ದಾರಿಗಳಾದ ರಂಗಪ್ಪ ಶೆಟ್ಟಿ, ಪುಟ್ಟಣ್ಣ, ಸೇಸಿ,ಬೈರ, ಗಂಗೆ, ಹಲೆಪೈಕದ ತಿಮ್ಮ ಇತ್ಯಾದಿ ಪಾತ್ರಗಳು ನಮ್ಮ ನಿತ್ಯ ಜೀವದಲ್ಲಿ ಹತ್ತಿರವಿದ್ದಂತೆ ಅನಿಸುತ್ತದೆ .
1936ರಲ್ಲಿ ಪ್ರಕಟವಾದ ಈ ಬೃಹತ್ ಕಾದಂಬರಿಯ ಶಿಲ್ಪ, ಭಾಷಾ ಬಳಕೆ ಮತ್ತು ಒಟ್ಟು ಜೀವನದರ್ಶನದ ದೃಷ್ಟಿಯಿಂದಲೂ ಕನ್ನಡ ಕಾದಂಬರಿ ಲೋಕಕ್ಕೆ ದೊರೆತ ಅನನ್ಯ ಕಾಣಿಕೆ ಎಂದು ಗುರುತಿಸಲಾಗುತ್ತದೆ. ವಿಮರ್ಶಕರ ಭಾಷೆಯಲ್ಲಿ ಹೇಳುವುದಾದರೆ ಇದು ಕನ್ನಡ ಸಾಹಿತ್ಯದ ನಿರ್ಮಾಣಶೀಲ ಯುಗದ ಪ್ರಮುಖ ಪ್ರತಿನಿಧಿ. ಅಷ್ಟೇ ಅಲ್ಲ, ಇದೊಂದು ಪದ್ಯ ಕಾವ್ಯ.
ಮುನ್ನುಡಿಯಲ್ಲಿ ಕುವೆಂಪು ಅವರು ’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ನವೋದಯ ಕಾಲಘಟ್ಟದ ಪ್ರಮುಖ ಕವಿಯಾಗಿದ್ದ ಕುವೆಂಪು ಅವರಿಗೆ ಗದ್ಯ ಅಭಿವ್ಯಕ್ತಿ ಹೊಸತೇನೂ ಆಗಿರಲಿಲ್ಲ. ನಾಟಕ, ಪ್ರಬಂಧ ಹಾಗೂ ಕಥೆಗಳಲ್ಲಿ ಅದು ಕಾಣಿಸಿಕೊಂಡಿತ್ತು. ಅವರು ತಮ್ಮ ಮಹಾಕಾವ್ಯಕ್ಕೆ ತಮ್ಮದೇ ಆದ ಛಂದಸ್ಸನ್ನು ಶೋಧಿಸಿಕೊಂಡಂತೆ ಕಾದಂಬರಿಗೆ ತಮ್ಮದೇ ಆದ ಮಾರ್ಗವೊಂದನ್ನು ಕುವೆಂಪು ಅವರು ಶೋಧಿಸಿಕೊಂಡಿದ್ದಾರೆ.
1999 ರಲ್ಲಿ ಗಿರೀಶ್ ಕಾರ್ನಾಡ್ ರವರು ಕಾನೂರು ಹೆಗ್ಗಡತಿ ಸಿನಿಮವಾಗಿ ನಟಿಸಿ ನಿರ್ದೇಶಿಸಿದ್ದರು.