ಯುವಕ ಯುವತಿಯರು ಸಾಮಾನ್ಯವಾಗಿ ಕೂದಲಿನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ. ಯುವತಿಯರಿಗೆ ಕೇಶ ದಪ್ಪವಾಗಿ ಉದ್ದವಾಗಿ ಚೆನ್ನಾಗಿ ಬೆಳೆದಿದ್ದರೆ ಸುಲಭವಾಗಿ ಬೇಕಾಗುವ ಹೇರ್ ಸ್ಟೈಲ್ ಮಾಡ್ಕೋ ಬಹುದು. ಇನ್ನೂ ಯುವಕರಿಗೂ ಕೂದಲು ದಪ್ಪವಾಗಿ ಬೆಳೆದಿದ್ದರೆ ಕೇಶ ವಿನ್ಯಾಸವನ್ನು ಚೆನ್ನಾಗಿ ಮಾಡಿಕೊಳ್ಳಬಹುದು. ಆದರೆ ಇಂದು ಯುವ ಪೀಳಿಗೆಗೆ ಕೂದಲಿನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ. ಕೂದಲು ಉದುರುವುದು, ಕೂದಲ ತುದಿ ಎರಡು ಭಾಗವಾಗುವುದು, ಕೂದಲು ಬಿಳಿ ಬಣ್ಣಕ್ಕೆ ಬದಲಾಗುವುದು ಹೀಗೆ ಹಲವಾರು ಸಮಸ್ಯೆಯನ್ನು ಇಂದಿನ ಯುವ ಪೀಳಿಗೆ ಅನುಭವಿಸುತ್ತಿದೆ. ಇಂತಹ ಸಮಸ್ಯೆಯಿಂದ ದೂರಾಗಿ ಕೂದಲು ಉತ್ತಮ ಹೊಳಪು ಮತ್ತು ಪೋಷಣೆ ಪಡೆದು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವಂತೆ ಮಾಡಲು ಇಲ್ಲಿದೆ ಕೆಲವು ಸಲಹೆಗಳು.
ನೆಲ್ಲಿಕಾಯಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆರೋಗ್ಯದ ವಿಚಾರದಲ್ಲಿ ನೋಡಿದರೂ ಉಪಕಾರಿ ಇತ್ತ ತ್ವಚೆಯ ವಿಚಾರದಲ್ಲೂ ಒಳ್ಳೆಯದು, ತಲೆಕೂದಲಿನ ವಿಚಾರಕ್ಕೆ ಬಂದಾಗಲು ಸಹಕಾರಿ ಆಗಿದೆ. ನೆಲ್ಲಿಕಾಯಿ ಪೌಡರ್ ಬಳಸಿಕೊಂಡು ಹೇರ್ ಪ್ಯಾಕ್ ತಯಾರಿಸಲು ಮೊದಲಿಗೆ ಕರಿಬೇವಿನ ಸೊಪ್ಪು, ನೆಲ್ಲಿಕಾಯಿ ಪೌಡರ್ ಜೊತೆಗೆ ಬ್ರಾಹ್ಮಿ ಪೌಡರ್ ಇವು ಮೂರು ಬಗೆಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ ನಂತರ ಇದನ್ನ ತಲೆ ಕೂದಲಿನ ಬುಡಕ್ಕೆ ಹಚ್ಚಿ ಸ್ಪಲ್ಪ ಹೊತ್ತು ಹಾಗೆ ಬಿಡಬೇಕು ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ.
ಇನ್ನೂ ನೆಲ್ಲಿಕಾಯಿಯನ್ನು ಹಾಗೆ ಸೇವಿಸುವುದರಿಂದ ಭಾರೀ ಪ್ರಯೋಜನಗಳಿವೆ, ಕೂದಲನ್ನು ಬಲಪಡಿಸುತ್ತದೆ, ಕಪ್ಪಾಗಿಸುತ್ತದೆ ಮತ್ತು ಬಿಳಿ ಕೂದಲಿನ ಸಮಸ್ಯೆಯಿಂದಲೂ ಪಾರು ಮಾಡುತ್ತದೆ.
ಕೂದಲು ಕಪ್ಪಾಗಲೂ ತೆಂಗಿನೆಣ್ಣೆ, ಬಾದಾಮಿ, ಸಾಸಿವೆ ಎಣ್ಣೆಯನ್ನು ಆಮ್ಲಾ ಪೌಡರ್ನಲ್ಲಿ ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ಭಾರೀ ಬೇಗನೆ ಉತ್ತಮ ರಿಸಲ್ಟ್ ಪಡೆಯಬಹುದು.
ಈರುಳ್ಳಿ ರಸದಲ್ಲಿ ಆಮ್ಲಾ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ, ಈಗ ಅದನ್ನು ಕೂದಲಿಗೆ ಅನ್ವಯಿಸಿ. ಹೀಗೆ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…