ಪೊಯೆಸಿ ಎಂಬ ಕುಟುಂಬ ವರ್ಗಕ್ಕೆ ಸೇರಿರುವ ಈ ಗೋಧಿಯು ಉತ್ತಮ ಆಹಾರಗಳಲದಲಿ ಒಂದಾಗಿದೆ. ಭಾರತದಲ್ಲಿ ಅಕ್ಕಿಯ ನಂತರ ಗೋಧಿ ಎರಡನೇ ಒರಮುಖ ಆಹಾರವಾಗಿದೆ. ದೇಶದ ಒಟ್ಟು ಆಹಾರ ಉತ್ಪಾದನೆಗೆ ಗೋಧಿ ಸುಮಾರು ೨೫% ದಷ್ಟು ಕೊಡುಗೆ ನೀಡುತ್ತದೆ.
ಭಾರತದಲ್ಲಿ ಗೋಧಿಯ ವರ್ಗೀಕರಣ
• ಎಮ್ಮರ್ ಗೋಧಿ
• ಮ್ಯಾಕ್ರೋನಿ ಗೊಧಿ
• ಸಾಮಾನ್ಯ ಗೋಧಿ
• ಕುಬ್ಜ ಗೋಧಿ
• ಟ್ರಿಟಿಕಮ್ ಎಸ್ಟಿವಮ್
ಗೋಧಿ ಬೇಸಾಯಕ್ಕೆ ಬೇಕಾದ ಹವಾಮಾನ ಪರಿಸ್ಥಿತಿ
ಗೋಧಿ ಬೆಳೆಗೆ ಉತ್ತಮ ಮತ್ತು ಏಕರೂಪದ ಮೊಳಕೆಯೊಡೆಯಲು ಮಣ್ಣಿನಲ್ಲಿ ಚನ್ನಾಗಿ ಪುಡಿಮಾಡಿದ ಕಾಂಪ್ಯಾಕ್ಟ್ ಗೊಬ್ಬರವನ್ನು ಸೇರಿಸುವ ಅಗತ್ಯವಿದೆ. ಗೋಧಿಯನ್ನು ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯದಲ್ಲಿ ಹಾಗೂ ೬೦ ಡಿಗ್ರೀಗಳಷ್ಟು ಎತ್ತರದ ಶೀತ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.
ಗೋಧಿ ಬೇಸಾಯಕ್ಕೆ ಮಣ್ಣಿನ ಅವಶ್ಯಕತೆ
ಭಾರತದಲ್ಲಿ ಗೋಧಿಯನ್ನು ವ್ಯಾಕ ಶ್ರೇಣಿಯ ಮಣ್ಣಿನಲ್ಲಿ ಬೇಳೆಯಲಾಗುತ್ತದೆ. ಗೋಧಿ ಕೃಷಿಗೆ ಜೇಡಿ ಮಣ್ಣು ಅಥವಾ ಮಧ್ಯಮ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮಣ್ಣು ಉತ್ತಮವಾಗಿರುತ್ತದೆ. ಸರಿಯಾದ ನೀರಾವರಿ ಮತ್ತು ಅಗತ್ಯ ಪೋಶಕಾಂಶ ಹೊಂದಿರುವ ಹಗುರುವಾದ ಮಣ್ಣಿನಲ್ಲಿ ಗೋಧಿಯನ್ನು ಉತ್ತಮವಾಗಿ ಬೆಳೆಯಬಹುದಾಗಿದೆ.
ಗೋಧಿ ಬಿತ್ತನೆಗೆ ಉತ್ತಮ ಸಮಯ
ನವೆಂಬರ್ ನಿಂದ ಡಿಸೆಂಬರ್ ವರೆಗೆ ಗೋಧಿ ಬೆಳೆಗೆ ಉತ್ತಮವಾಗಿದೆ. ದೇಶದ ಪ್ರತಿ ಭಾಗದಲ್ಲೂ ವ್ಯತ್ಯಾಸವಿರಬಹುದು. ಕೆಲವೊಮ್ಮೆ ತಡವಾಗಿ ಬಿತ್ತನೆ ಮಾಡಬಹುದು ಅಥವಾ ಕೆಲವೊಮ್ಮೆ ಬೇಗ. ಬಿತ್ತನೆ ಮಾಡುವ ಮೊದಲು ಬೀಜಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಬೇಕು. ಬಿತ್ತನೆ ಮಾಡುವಾಗ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಹೆಚ್ಚಾಗಿ ಆಳದಲ್ಲಿ ನಾಟಿ ಮಾಡಬಾರದು.
ಗೋಧಿಯಿಂದ ಆಹಾರ ಲಾಭಗಳು
• ಗೋಧಿ ಹೆಚ್ಚಿನ ಪ್ರೋಟಿನ್ ಮೂಲವನ್ನು ಹೊಂದಿದೆ
• ಫೈಬರ್ ಹೆಚ್ಚಾಗಿದೆ
• ಮ್ಯಾಂಗನೀಸ್ನ ಉತ್ತಮ ಮೂಲವಾಗಿದೆ
ಶಿಕ್ಷಕರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತವೆ. ಇದಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ…
ಜೊಮ್ಯಾಟೊದಿಂದ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಅಂಜಲಿ ಕೊಲೆಗೆ ಪೊಲೀಸರೆ ಹೊಣೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ಅಂಜಲಿ…
ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…
ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ…
ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು,…