‘ಭಾವ ತೀರ ಯಾನ -ಎ.ಆರ್.ಮಣಿಕಾಂತ್’ ರ ಕೃತಿಯಾಗಿದೆ. ಈ ಪುಸ್ತಕದ ಪ್ರತಿ ಪುಟದಲ್ಲೂ ಜೀವಂತಿಕೆಯಿದೆ. ಗೆಲುವಿನ ಸುವಾಸನೆಯಿದೆ, ಪ್ರೀತಿಯಿದೆ.
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಭಾವತೀರಯಾನ ಅಂಕಣಗಳ ಸಂಕಲಿತ ರೂಪವೇ ಭಾವತೀರಯಾನ. ನಡೆವ ದಾರಿಯಲ್ಲಿ ಸಂಪೂರ್ಣವಾಗಿ ಕತ್ತಲು ಕವಿದಿದ್ದರೂ ಮುಂದೆ ಬೆಳಕಿದ್ದೇ ಇರುತ್ತದೆ ಎನ್ನುವ ಧೈರ್ಯದ ಮಾತುಗಳನ್ನು ತುಂಬುವಂತಹ ಲೇಖನಗಳು ಇವಾಗಿವೆ.
ರಾಘವೇಂದ್ರ ಜೋಷಿಯವರು ಹೇಳುವಂತೆ ಈ ಕೃತಿಯಲ್ಲಿನ ಬರಹಗಳಲ್ಲಿ ಯಾವುದೂ ಕಟ್ಟುಕತೆಗಳಿಲ್ಲ. ಸಪ್ತ ಸಾಗರದಾಚೆ ಒಬ್ಬ ರಾಜನಿದ್ದ- ಅಂತ ಹೇಳುವದಿಲ್ಲ. ಅಲ್ಲೊಂದು ಇಲ್ಲೊಂದು ಕಲ್ಪನೆಯ ‘ವಾಸ್ತವ ಚಿತ್ರಣ’ವಿರುವ ಸಣ್ಣಕತೆ ಅಥವಾ ಲಹರಿಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಸತ್ಯಕತೆಗಳೇ. ನಮ್ಮ ಕಣ್ಣಮುಂದೆ ನಡೆದಿರುವಂಥವುಗಳೇ. ಒಟ್ಟಾರೆಯಾಗಿ ಇಡೀ ಪುಸ್ತಕ ಒಂದು ಲೌಕಿಕ ಭರವಸೆಯನ್ನು ಕಟ್ಟಿಕೊಡುವದರಲ್ಲಿ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತಲಿದೆ.
ಇಡೀ ಪುಸ್ತಕದ ಭಾವವನ್ನು ಒಂದು ಸಾಲಿನಲ್ಲಿ ಕಟ್ಟಿಕೊಡುವ ನಿರರ್ಥಕ ಪ್ರಯತ್ನ ಮಾಡಬಹುದಾದರೆ, ಗೆಲುವಿನ ಸುವಾಸನೆಯಿದೆ, ಪ್ರೀತಿಯಿದೆ. ಸೋಲಿಸಬೇಡ, ಗೆಲ್ಲಿಸಯ್ಯ…. ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯು ಆಗಿದೆ. ತಮಾಷೆಯೆಂದರೆ, ಸದಾ ಗೆಲುವಿಗಾಗಿ ಹಂಬಲಿಸುವ, ಗೆಲುವನ್ನೇ ಧ್ಯಾನಿಸುವ ಮನುಷ್ಯ ರಿಸ್ಕ್ ಗೆ ಕೈ ಹಾಕಲು ಹಿಂಜರಿಯುತ್ತಾ, ಹೆದರುತ್ತಾನೆ. ಹೀಗೆ ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು -ಒಳ್ಳೆಯದಾಗುತ್ತೆ ಕಂದಾ, ಹೋಗಿ ಬಾ ಎಂದು ಅಮ್ಮ ಶುಭ ಹಾರೈಸುತ್ತಾಳಲ್ಲ ಅಂತಹ ಅಕ್ಕರೆಯಿದೆ. ಈ ಕೃತಿಯ ಆಶಯವೇನೆಂದರೆ ಗೆಲುವೆಂಬುದು ನಮ್ಮ ಜೊತೆಗಿರುವ ಎಲ್ಲರಿಗು ದೊರಕಲಿ ಎಂಬುದಾಗಿದೆ.