ಅನೇಕ ಜನರು ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತಲೇ ಇರುತ್ತಾರೆ! ಆದರೆ ಒತ್ತಡಗಳು ಎಲ್ಲಿಂದ ಬರುತ್ತಿವೆ ಎಂದು ಅವರನ್ನು ಕೇಳಿದಾಗ, ಅವರು “ನನಗೆ ಗೊತ್ತಿಲ್ಲ” ಅಥವಾ “ಎಲ್ಲಾ ಕಡೆಯಿಂದಲೂ” ಎಂದು ಹೇಳುತ್ತಾರೆ! ಇಂತಹ ಪರಿಸ್ಥಿತಿ ನಿಮ್ಮದೂ ಆಗಿದೆಯೇ?
ಒತ್ತಡ ಎಲ್ಲಿಂದ ಬರುತ್ತಿದೆ ಎಂಬುದನ್ನು ಗುರುತಿಸಲು ಹೆಚ್ಚಿನ ಜನರಿಗೆ ಕಷ್ಟವಾಗುತ್ತದೆ! ಆದರೆ ಅವರು ಒತ್ತಡವನ್ನು ಅನುಭವಿಸುತ್ತಲೇ ಇರುತ್ತಾರೆ! ಕೆಲವೊಮ್ಮೆ ಅವರು ಸಾಕಷ್ಟು ಹತಾಶೆ, ಕೋಪ, ಅಸಹಾಯಕತೆ, ಕಿರಿಕಿರಿ, ಆಯಾಸ ಮತ್ತು ಮುಂತಾದವುಗಳನ್ನು ಅನುಭವಿಸುತ್ತಾರೆ, ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ!
ನೀವು ಒತ್ತಡಕ್ಕೊಳಗಾದಾಗಲೆಲ್ಲಾ, ನೀವು ಅದನ್ನು ಗಮನಿಸಬೇಕು ಮತ್ತು ಅದು ಎಲ್ಲಿಂದ ಬರುತ್ತಿದೆ ಎಂಬುದನ್ನು ಕಂಡುಹಿಡಿಯಬೇಕು! ಕೆಲವೊಮ್ಮೆ, ಇದು ನಿಮ್ಮ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಅಥವಾ ಹೊರಗಿನ ಶಬ್ದ, ದಟ್ಟಣೆ ಮುಂತಾದ ಬಾಹ್ಯ ವಿಷಯಗಳು ಒತ್ತಡವನ್ನುಂಟುಮಾಡುತ್ತವೆ! ಕೆಲವೊಮ್ಮೆ, ಅದು ನಮ್ಮ ಒಳಗಿನಿಂದಲೂ ಬರುತ್ತಿರಬಹುದು! ಏನೂ ಸಂಭವಿಸದಿದ್ದರೂ ಸಹ, ಒಬ್ಬ ವ್ಯಕ್ತಿಯು ತನ್ನದೇ ಆದ ಆತಂಕ ಅಥವಾ ಋಣಾತ್ಮಕ ಕಲ್ಪನೆಗಳಿಂದಾಗಿ ಒತ್ತಡಕ್ಕೆ ಒಳಗಾಗಬಹುದು! ಅದನ್ನು ‘ಸ್ವಯಂ-ಹೇರಿಕೆಯ ಒತ್ತಡ’ ಎಂದು ಕರೆಯಬಹುದು. ಅಂತಹ ಒತ್ತಡಕ್ಕೆ ನೀವಲ್ಲದೆ ಇನ್ಯಾರೂ ಜವಾಬ್ದಾರರಾಗಿರುವುದಿಲ್ಲ!
ಯಾವುದೇ ರೀತಿಯ ಒತ್ತಡ, ಅದು ಒಂದು ನಿರ್ದಿಷ್ಟ ಹಂತವನ್ನು ಮೀರಿದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಅದನ್ನು ಪರಿಹರಿಸುವುದು ಬಹಳ ಮುಖ್ಯ. ಕೆಲವು ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 70 ಪ್ರತಿಶತ ಉದ್ಯೋಗಿಗಳು ಒತ್ತಡವನ್ನು ಅನುಭವಿಸುತ್ತಿದ್ದಾರೆ! ಇದು ತುಂಬಾ ಗಮನೀಯವಾದ ಸಂಗತಿಯಾಗಿದೆ.
ಇನ್ನೊಂದು ಗುರುತಿಸಬೇಕಾದ ಅಂಶವೆಂದರೆ, ಒತ್ತಡವು ಸೈಲೆಂಟ್ ಕಿಲ್ಲರ್ ನಂತೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆರಂಭದಲ್ಲಿ ಕಡೆಗಣಿಸಲ್ಪಡುತ್ತದೆ! ನಂತರ ಅದರ ತೀವ್ರತೆ ಹೆಚ್ಚಾದಂತೆ ಗಮನಕ್ಕೆ ಬರುತ್ತದೆ, ಆದರೆ ವ್ಯಕ್ತಿಯು ಅದನ್ನು ಸಾಧ್ಯವಾದಷ್ಟು ಸಹಿಸಿಕೊಳ್ಳುತ್ತಾನೆ. ಅದು ಮುಂದಿನ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ ನಂತರ, ಅವರು ಪರಿಹಾರಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ! ವಿಪರೀತ ಮಟ್ಟದ ಒತ್ತಡದಿಂದಾಗಿ ಅನೇಕ ಜನರು ಇರಿಟೇಬಲ್ ಬೋವೆಲ್ ಸಿಂಡ್ರೋಮ್ (ಐಬಿಎಸ್) ಅನ್ನುವ ರೋಗಕ್ಕೆ ತುತ್ತಾಗುತ್ತಾರೆ! ಆದ್ದರಿಂದ, ಒತ್ತಡದ ಬಗ್ಗೆ ಅಸಡ್ಡೆ ಮಾಡಬೇಡಿ. ನಿಮ್ಮ ಜೀವನದ ಪ್ರಗತಿಯ ಜೊತೆಗೆ ಸ್ವ-ಆರೈಕೆಯತ್ತ ಗಮನಹರಿಸುವುದು ಮುಖ್ಯ!