ವಾರಣಾಸಿ: ಜುಲೈ 4 ರಿಂದ 59 ದಿನಗಳ ಕಾಲ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ‘ಸ್ಪರ್ಶ ದರ್ಶನ’ (ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ಪ್ರಾರ್ಥನೆ) ನಿಷೇಧಿಸಲು ದೇವಳ ಆಡಳಿತ ನಿರ್ಧರಿಸಿದೆ.
ಸಾವನ್ನ ಪವಿತ್ರ ತಿಂಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಈ ಅವಧಿಯ ಎಂಟು ಸೋಮವಾರಗಳಂದು ವಿಐಪಿ ದರ್ಶನವನ್ನು ಸಹ ನಿರ್ಬಂಧಿಸಲಾಗುತ್ತದೆ. ‘ಮಂಗಳ ಆರತಿ’ ಹೊರತುಪಡಿಸಿ, ಈ ಅವಧಿಯಲ್ಲಿ ಯಾವುದೇ ಆರತಿ ಟಿಕೆಟ್ ನೀಡಲಾಗುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಮತ್ತು ಪೊಲೀಸ್ ಆಯುಕ್ತ ಅಶೋಕ್ ಮುತಾ ಜೈನ್ ಅವರು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು.