ಮಂಗಳೂರು: ಜೆಪ್ಪು, ಸಂತ ಅಂತೊನಿಯವರಿಗೆ ಸಮರ್ಪಿಸಿದ ಆಶ್ರಮದ ಮತ್ತು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಇದೇ ಜೂ. 13ರಂದು ಮಿಲಾಗ್ರಿಸ್ ಚರ್ಚಿನಲ್ಲಿ, ಸೊಮವಾರದಂದು ವಿಜೃಂಭನೆಯಿಂದ ನಡೆಯಲಿರುವುದು.
ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಮೇ 31, ಮಂಗಳವಾರದಿಂದ ನವೆನಾ ಪ್ರಾರ್ಥನೆಯು ಆರಂಭಗೊಂಡಿವೆ. ಮೇ 31ರಿಂದ ಜೂನ್ 12ರವರೆಗೆ ಪ್ರತಿದಿನ ಬೆಳಿಗ್ಗೆ 6 ಘಂಟೆಗೆ, ಬೆಳಿಗ್ಗೆ 11.30 ಘಂಟೆಗೆ ಹಾಗೂ ಸಾಯಂಕಾಲ 6 ಘಂಟೆಗೆ ನವೆನಾ ಪ್ರಾರ್ಥನೆ, ಬಲಿಪೂಜೆ ಮತ್ತು ರೋಗಿಗಳಿಗೆ ವಿಶೇಷ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಲಯದ ವಿವಿಧ ಚರ್ಚಿನ ದರ್ಮಗುರುಗಳು ಪ್ರಾರ್ಥನೆಯನ್ನು ನೆರವೆರಿಸುವರು.
ವಾರ್ಷಿಕ ಮಹೋತ್ಸವದ ಜೂ. 13ರಂದು 4 ಬಲಿಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8.15 ಘಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆ, ಬೆಳಿಗ್ಗೆ 11 ಘಂಟೆಗೆ ಜೆಪ್ಪು ಆಶ್ರಮದಲ್ಲಿಎಲ್ಲಾ ದಾನಿಗಳಿಗೋಸ್ಕರ ವಿಶೇಷ ಬಲಿಪೂಜೆ, ಸಾಯಾಂಕಾಲ 4 ಘಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಮಾಲಯಾಳಮ್ ಬಾಷೆಯಲ್ಲಿ ಹಾಗೂ ಸಾಯಂಕಾಲ 6 ಘಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಸಂಭ್ರಮಿಕ ಬಲಿಪೂಜೆ ನಡೆಯಲಿರುವುದು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನುಅರ್ಪಿಸುವರು. ಅದೇ ದಿನ ಸಂತ ಅಂತೊನಿಯ ಆಶ್ರಮದ ಶತಮಾನೋತ್ತರ ಬೆಳ್ಳಿ ಹಬ್ಬದ ಉದ್ಘಾಟನೆಯು ನಡೆಯಲಿರುವುದು. ಶತಮಾನೋತ್ತರ ಬೆಳ್ಳಿ ಹಬ್ಬದ ಪ್ರಯುಕ್ತ ಹಲವಾರು ಕರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.