ಸಂತ ಜಾನ್ ಬ್ರಿಟ್ಟೊ ದೇವಾಲಯ ನಾರಂಪಡಿ ಇದರ ವಾರ್ಷಿಕ ಹಬ್ಬವು ವಿಜೃಂಭನೆಯಿಂದ ಜರಗಿತು. ಬಲಿಪೂಜೆಯ ನೇತೃತ್ವವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಷಲ್ ವಿಕಾರ್ ವಂದನೀಯ ಫಾ| ವಾಲ್ಟರ್ ಡಿ’ಮೆಲ್ಲೊ ಅವರು ತಮ್ಮ ಪ್ರವಚನದಲ್ಲಿ ಭಕ್ತರು ಏಕ ಮನಸ್ಸಿನಿಂದ ಏಕ ಹೃದಯದಿಂದ ಅನ್ಯೋನ್ಯತೆಯಾಗಿ ಸಮಾಜದಲ್ಲಿ ಬಾಳಬೇಕು. ಪರಸ್ಪರ ಪ್ರೀತಿ, ವಾತ್ಸಲ್ಯ, ಭಾವೈಕ್ಯ ದಿಂದ ಬಾಳಿ, ಏಸು ಕ್ರಿಸ್ತರ ಆದರ್ಶ ತಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು.
ಕಾಸರಗೋಡು ವರಾಡೊ ಇದರ ವಿಕಾರ್ ವಾರ್ ವಂದನೀಯ ಫಾ| ಸ್ಟೇನಿ ಪಿರೇರ, ಮಂಜೇಶ್ವರ ಚರ್ಚಿನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಸಲ್ಡಾನ ಹಾಗೂ ಅನೇಕ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು. ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ| ಜಾನ್ ಬ್ಯಾಪ್ಟಿಸ್ಟ್ ಮೊರಸ್ ಅವರು ಧನ್ಯವಾದ ಅರ್ಪಿಸಿದರು.