ಮಂಗಳೂರು : 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ನೇತಾಜಿ ಸುಭಾಶ್ಚಂದ್ರ ಬೋಸ್ರವರ ಆಜಾದ್ ಹಿಂದ್ ದಿವಸ್ ಕಾರ್ಯಕ್ರಮ ದಿನಾಂಕ 21-10-2021 ರಂದು ಬ್ರಿಲಿಯಂಟ್ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿಲಿಯಂಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಅಂ ರಾಮ್ ಮೋಹನ್ ರೈ ಮಾತನಾಡಿ, “ಭಾರತದ ಘನತೆ, ಸರ್ವಭೌಮತೆ ಮತ್ತು ಸ್ವಾಭಿಮಾನವನ್ನು ಎತ್ತಿ ಹಿಡಿಯುವುದೇ ಸುಭಾಶ್ಚಂದ್ರ ಬೋಸರ “ಆಜ಼ಾದ್ ಹಿಂದ್” ಘೋಷಣೆಯ ಮುಖ್ಯ ಪರಿಕಲ್ಪನೆಯಾಗಿತ್ತು.
ಸುಭಾಶ್ಚಂದ್ರ ಬೋಸರು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ದ ಭಾರತದ ಸ್ವಾತಂತ್ರ್ಯಕ್ಕೆ ಜಗತ್ತಿನಾದ್ಯಂತ ವಿವಿಧ ದೇಶಗಳನ್ನು ಸಂಘಟಿಸಲು ಅವಿರತ ಶ್ರಮಿಸಿದರು. ಭಾರತದ ಏಕತೆ ಮತ್ತು ಅಖಂಡತೆಯನ್ನು ಗುರಿಯಾಗಿರಿಸಿ ಭಾರತ ರಾಷ್ತ್ರೀಯ ಸೇನೆಯ ಮೂಲಕ ಅಪ್ರತಿಮ ಸೇನಾನಿಯಾದರು.
ಅವರ ಶಿಸ್ತು, ಆರ್ಶಮನೋಭಾವ, ಹೋರಾಟದ ಛಲ ನಮಗೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಸ್ಪರ್ತಿದಾಯಕ ಮತ್ತು ಅವರ ಸ್ಮರಣೆ ಬಹಳ ಮಹತ್ವಪರ್ಣವಾದುದು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾಟಟ ಬಿಂದುಸಾರ ಶೆಟ್ಟಿ ಮಾತನಾಡಿ ನೇತಾಜಿ ಸುಬಾಶ್ಚಂದ್ರ ಬೋಸರು ಭಾರತ ರಾಷ್ತ್ರೀಯ ಕಾಂಗ್ರೇಸಿನ ಅದ್ಯಕ್ಷರಾಗಿ ಭಾರತವು ಸ್ವಾತಂತ್ರ್ಯ ನಂತರ ಹೇಗಿರಬೇಕು, ಮುಂದೆ ಯಾವ ಯೋಜನೆಗಳನ್ನು ಅನುಷ್ಟಾನ ಗೊಳಿಸಬೇಕು ಎಂಬ ದೂರದೃಷ್ಟಿ ಯೋಚನೆ ಹಾಗೂ ಬ್ರಿಟಿಷರ ವಿರುದ್ಧ ಕೈಗೊಂಡ ಚಳವಳಿಗಳ ಬಗ್ಗೆ ವಿವರಿಸಿದರು. ವಿದ್ಯರ್ಥಿಗಳು ಸುಭಾಶ್ಚಂದ್ರ ಬೋಸರ ದೂರರ್ಶಿತ್ವ ಮತ್ತು ಅವರ ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.
ಸ್ವಾಗತ ಭಾಷಣ ಮಾಡಿದ ಉಪನ್ಯಾಸಕ ಶ್ರೀ ನವೀನ್ ಮಾತನಾಡಿ ತೀವೃಗಾಮಿ ಮತ್ತು ಮಂದಗಾಮಿ ಮುಖಂಡರ ಧೋರಣೆಗಳು ಹಾಗೂ ಸುಭಾಶ್ಚಂದ್ರ ಬೋಸರು ಮಹಾತ್ಮ ಗಾಂಧಿಯೊಂದಿಗಿನ ಸಂಬಂಧ ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸುಭಾಶ್ಚಂದ್ರ ಬೋಸರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಪನ್ಯಾಸಕಿ ಕುಮಾರಿ ಸೀಮಾ ವಂದಿಸಿ, ಉಪನ್ಯಾಸಕಿ ಕುಮಾರಿ ಶ್ವೇತಾ ಪೈ ಕರ್ಯಕ್ರಮ ನಿರೂಪಿಸಿದರು.