ಮOಗಳೂರು : ನಗರದ ಬ್ಯಾಂಕ್ ಆಫ್ ಬರೋಡ ವಲಯ ಕಚೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿಮ “ಸ್ವಾತಂತ್ರ್ಯದ ಸಂಭ್ರಮಕ್ಕೊOದು ಸಂಜೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಕವಿ ಸಮ್ಮೇಳನದ ಮೂಲಕ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುವ 12 ಮಂದಿ ಕವಿಗಳು ಸ್ವಾತಂತ್ರ್ಯಕ್ಕೆ ಸಂಬOಧಿಸಿದ ತುಳು, ಕನ್ನಡ, ಹಿಂದಿ ಬಹುಭಾಷೆಗಳ ಕವನಗಳನ್ನು ಓದುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಮೆಲಕು ಹಾಕಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ವಲಯ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಆರ್ ಮಾತಾನಾಡಿ ಭಾಷೆ ದೇಶವನ್ನು ಒಟ್ಟು ಮಾಡುವ ಕೊಂಡಿ ಎಂದು ಹೇಳಿದರು. ಕನ್ನಡ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಡಾ ವಿಶ್ವನಾಥ ಬದಿಕಾನ, ಎಲ್ಲ ಭಾಷೆಗಳ ಧ್ಯೇಯ ವಾಕ್ಯ ರಾಷ್ಟç ಪ್ರೇಮವಾಗಿದೆ ಎಂದರು. ಹಿಂದಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಲಯ ಉಪ ಮಹಾ ಪ್ರಬಂಧಕರಾದ ವಿನಯ ಗುಪ್ತ ವಹಿಸಿದ್ದರು. ಪ್ರಾಸ್ತವಿಕವಾಗಿ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಾಯಾ ಎಸ್ ಮಾತಾಡಿದರು. ಬ್ಯಾಂಕ್ ಆಫ್ ಬರೋಡದ ವಲಯ ಉಪ ಮುಖ್ಯಸ್ಥರಾದ ಶ್ರೀ ಗೋಪಾಲಕೃಷ್ಣ ಅರ್ ಅವರು ಸ್ವಾಗತಿಸಿದರು, ಶ್ರೀಮತಿ ರಾಜೇಶ್ವರಿ ಪಿ ವಂದಿಸಿದರು. ಶ್ರೀ ಸಂತೋಷ್ ತೆಲ್ಕಿಕಾರ್ ಮತ್ತು ಶ್ರೀ ಸದಾಶಿವ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿದರು.