ಧನ್ಬಾದ್: ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ನಡೆದ ಗ್ರಾಮದ ಜಾತ್ರೆಯೊಂದರಲ್ಲಿ ಆಹಾರ ಸೇವಿಸಿದ ಸುಮಾರು 150 ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಧನಬಾದ್ ಜಿಲ್ಲೆಯ ಹುಚ್ಚುಕ್ತಾಂಡ್ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಭೋಕ್ತಾ ಮೇಳವನ್ನು ಆಯೋಜಿಸಲಾಗಿದ್ದು, ಅನೇಕ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸ್ಟಾಲ್ಗಳಲ್ಲಿ ಆಹಾರ ಸೇವಿಸಿದ ಅನೇಕರಿಗೆ ಹೊಟ್ಟೆನೋವು, ಭೇದಿ, ವಾಂತಿ ಕಾಣಿಸಿಕೊಂಡಿದೆ. ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಬುಧವಾರ ಶಹೀದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಬಲಿಪುರ ಬ್ಲಾಕ್ ಸರ್ಕಲ್ ಆಫೀಸರ್ ರಾಮಪ್ರವೇಶ ಅವರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತರ ಚಿಕಿತ್ಸೆ ಕುರಿತು ವಿವರ ಪಡೆದರು. ಸಂಜೆ ನಡೆದ ಭೋಕ್ತಾ ಜಾತ್ರೆಯಲ್ಲಿ ಚಾಟ್ ತಿಂದ ಬಳಿಕ ವಾಂತಿ, ಬೇಧಿ ಕಾಣಿಸಿಕೊಂಡಿದೆ ಎಂದು ರೋಗಿಗಳು ತಿಳಿಸಿದ್ದಾರೆ.