ಮಡಿಕೇರಿ: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ ನಡೆಸಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ನಡೆದಿದೆ.
ಕೇರಳದ ಮಲಪ್ಪುರಂ ಮೂಲದ ಗುತ್ತಿಗೆದಾರ ಶಂಜಾದ್ ಅವರು ಮೈಸೂರಿನಲ್ಲಿ ಚಿನ್ನಾಭರಣ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಕಾರು ನಿಲ್ಲಿಸಿ ದರೋಡೆ ಮಾಡಿದ್ದಾರೆ.
ಕಾಮಗಾರಿಗಾಗಿ ಪತ್ನಿಯ 750 ಗ್ರಾಂ ಚಿನ್ನ ಮಾರಿದ್ದೇನೆ ಎಂದಿರೋ ಶಂಜಾದ್ ಸ್ನೇಹಿತ ಆಘ್ನು ಜೊತೆ ಕೇರಳಕ್ಕೆ ಹಿಂದಿರುಗುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಶಂಜಾದ್ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ದರೋಡೆ ಬಳಿಕ ಕಾರನ್ನೂ ಕಿತ್ತುಕೊಂಡು ಹೋಗಿದ್ದ ದುಷ್ಕರ್ಮಿಗಳು ವಿರಾಜಪೇಟೆಯ ಕೊಳತ್ತೋಡು ಬಳಿ ಬಿಟ್ಟುಹೋಗಿದ್ದಾರೆ. ಸದ್ಯ ಕಾರು ಪತ್ತೆಯಾಗಿದ್ದು, ಏನಾದರು ಸುಳಿವು ಸಿಗಬಹುದಾ ಅಂತಾ ಗೋಣಿಕೊಪ್ಪ ಪೊಲೀಸರು ಹುಡುಕಾಟ ನಡೆಸಿದ್ದಾರೆ.