ನೆಲಮಂಗಲ: ಬಡ್ಡಿ ಕೊಡುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿಯಿಂದ 35 ಸಾವಿರ ರೂ. ಹಣ ಪಡೆದು ಕಾನ್ಸ್ಟೇಬಲ್ ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ.
ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್ಟೇಬಲ್ ಕಾರ್ತಿಕ್ರಿಂದ ಗೃಹರಕ್ಷಕ ದಳದ ಸಿಬ್ಬಂದಿ ರಾಜುಗೆ ವಂಚನೆ ಮಾಡಲಾಗಿದೆ. ಕಾರ್ತಿಕ್ ಮಾತು ನಂಬಿ ರಾಜು ಬ್ಯಾಂಕ್ನಲ್ಲೇ ಹಣ ಕೊಟ್ಟಿದ್ದ. ಇದೀಗ ಕಾನ್ಸ್ಟೇಬಲ್ ಕಾರ್ತಿಕ್ ಹಣ ವಾಪಸ್ ಕೇಳಿದರೆ ಸಬೂಬು ಹೇಳುತ್ತಿದ್ದಾ. ಈ ಕುರಿತಾಗಿ ನೆಲಮಂಗಲ ಟೌನ್ ಠಾಣೆಗೆ ಹೋಂಗಾರ್ಡ್ ರಾಜು ದೂರು ನೀಡಿದ್ದಾರೆ.
ಅಡವಿಟ್ಟ ಕಾರು ಬಿಡಿಸಿಕೊಳ್ಳಲು ರಾಜು ಬಳಿಯಿಂದ ಹಣ ಪಡೆದಿದ್ದ.
ಹಣ ವಾಪಸ್ ಕೊಡಿಸುವುದಾಗಿ ನೆಲಮಂಗಲ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ರವಿ ಭರವಸೆ ನೀಡಿದ್ದಾರೆ. ಈ ಹಿಂದೆಯೂ ಹಲವರ ಬಳಿ ಹಣ ಪಡೆದು ಕಾರ್ತಿಕ್ ವಂಚಿಸಿದ್ದ ಎನ್ನಲಾಗಿದೆ.