ತಮಿಳುನಾಡು: ಇಲ್ಲಿ ಜವಾಡಿ ಬೆಟ್ಟದಲ್ಲಿ ಜಿಂಕೆ ಬೇಟೆಗೆಂದು ಹೋಗಿದ್ದ ಸ್ನೇಹಿತರಲ್ಲಿ ಓರ್ವ ಜಿಂಕೆ ಬದಲು ಸ್ನೇಹಿತನಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಜಮುನಾಮರತೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಅವರು ದೀಪಾವಳಿ ಸಂದರ್ಭದಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಲು ಬೆಟ್ಟಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ನ ಸದಸ್ಯರೊಬ್ಬರು ಜಿಂಕೆಯನ್ನು ಗುರಿಯಾಗಿಸಿಕೊಂಡು ಹೋಗುತ್ತಿದ್ದಾಗ ಗುಂಡು ಶಕ್ತಿವೇಲ್ಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಕಾಶ್ ಮುಖಕ್ಕೆ ಗಾಯವಾಗಿದೆ.ಪೊಲೀಸರ ಪ್ರಕಾರ, ಶಕ್ತಿವೇಲ್ ಅವರ ಸಂಬಂಧಿಕರು ಪೊಲೀಸರಿಗೆ ಅಥವಾ ಅರಣ್ಯ ಅಧಿಕಾರಿಗಳಿಗೆ ತಿಳಿಸದೆ ಶವವನ್ನು ಹೂಳಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.