ಭುವನೇಶ್ವರ: ಕೋಣೆಗೆ ವಿಷಕಾರಿ ಕಾಳಿಂಗ ಸರ್ಪವನ್ನು ಬಿಟ್ಟು ಪತ್ನಿ ಬಸಂತಿ ಪಾತ್ರಾ ಮತ್ತು ಅವರ ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ಗಣೇಶ್ ಪಾತ್ರಾ (25) ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗಂಜಾಂ ಜಿಲ್ಲೆಯ ಕಬಿಸೂರ್ಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಧೇಗಾಂವ್ನಲ್ಲಿ ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕುಟುಂಬ ಕಲಹ ಮತ್ತು ಹಾವು ಕಡಿತಕ್ಕೊಳಗಾದವರಿಗೆ ನಿಗದಿಪಡಿಸಿದ 8 ಲಕ್ಷ ರೂ.ಗಳ (ತಲಾ 4 ಲಕ್ಷ ರೂ.) ಪರಿಹಾರದ ಪಡೆಯಲು ಪತಿ ನೀಚ ಕೆಲಸ ಮಾಡಿದ್ದಾನೆ.
ಅಕ್ಟೋಬರ್ 7 ರ ಬೆಳಿಗ್ಗೆ ಸಂತ್ರಸ್ತರು ಶವವಾಗಿ ಪತ್ತೆಯಾದಾಗ ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವೆಂದು ಪರಿಗಣಿಸಲಾಗಿತ್ತು, ಆದರೆ ಬಸಂತಿಯ ತಂದೆ ಖಲ್ಲಿ ಪಾತ್ರಾ ತಮ್ಮ ಅಳಿಯನ ವಿರುದ್ಧ ದೂರು ದಾಖಲಿಸಿದ್ದರಿಂದ ತನಿಖೆಯು ತಿರುವು ಪಡೆಯಿತು. ಬಳಿಕ ಪೊಲೀಸರು ಗಣೇಶ್ ಪಾತ್ರಾ ನನ್ನು ಸತತ ವಿಚಾರಣೆ ನಡೆಸಿದ ಬಳಿಕ ತಾನು ಪರಿಹಾರ ಹಣ ಪಡೆಯಲು ಹೀಗೆ ಹಾವು ಬಿಟ್ಟು ಪತ್ನಿ, ಮಗಳನ್ನು ಕೊಂದಿರುವುದಾಗಿ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ ಹಾವಾಡಿಗನನ್ನು ಕೂಡ ಪೊಲೀಸರು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.