ಮೂಡಿಗೆರೆ: ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ 100 ಅಡಿಯಷ್ಟು ಆಳದ ಪ್ರಪಾತಕ್ಕೆ ಲಾರಿ ಉರುಳಿಬಿದ್ದಿದೆ. ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಟ್ಟ ಮಂಜು ಮತ್ತು ಮಳೆಯ ಕಾರಣ ರಸ್ತೆ ಗೋಚರತೆ ಕಡಿಮೆಯಾದ ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ವೇಗವಾಗಿ ಬಂದು ತಡೆಗೋಡೆಗೆ ಡಿಕ್ಕಿಯಾದ ಕಾರಣ ಲಾರಿ ಪ್ರಪಾತಕ್ಕೆ ಉರುಳಿದೆ.