News Karnataka Kannada
Saturday, April 27 2024
ಕ್ರೈಮ್

ಕೆಎಸ್ಆರ್ ಟಿಸಿ ಬಸ್ – ದ್ವಿಚಕ್ರ ವಾಹನ ಢಿಕ್ಕಿ: ಇಬ್ಬರು ಯುವಕರು ಸಾವು

KSRTC bus-two-wheeler collision; Two youths killed
Photo Credit : News Kannada

ಕಲಬುರಗಿ: ಕೆಎಸ್ಆರ್ ಟಿಸಿ  ಸಿಬಸ್ ಮತ್ತು ದ್ವಿ-ಚಕ್ರ ವಾಹನ ಮುಖಾಮುಖಿ ಢಿಕ್ಕಿ ಹೊಡೆದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಳಂದ ತಾಲ್ಲೂಕಿನ ಕಡಗಂಚಿ -ಲಾಡಚಿಂಚೋಳಿ ಮಧ್ಯೆ ನಡೆದಿದೆ.

ಮೃತ ಯುವಕರನ್ನು ಲಾಡಮುಗಳಿ ಗ್ರಾಮದ ಶಶಿಕಾಂತ ಶ್ರೀಮಂತ ಕಟ್ಟಬೂರೆ (27), ಶಿವಕುಮಾರ ಅಂಬಣ್ಣ (25) ಎಂದು ಗುರುತಿಸಲಾಗಿದೆ. ಲಾಡಮುಗಳಿಯಿಂದ ಕೋರಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿಂದ ಲಾಡಚಿಂಚೋಳಿ ಮಾರ್ಗವಾಗಿ ಕಡಗಂಚಿಗೆ ಬರುತ್ತಿರುವಾಗ ಕಲಬುರಗಿಯಿಂದ ಆಳಂದಕ್ಕೆ ಬರುವ ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.

ಡಿವೈಎಸ್ಪಿ ಗೋಪಿ ಆರ್, ಸಿಪಿಐ ಭಾಸು ಚವ್ಹಾಣ್, ಪಿಎಸ್‌ಐ ಗಂಗಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು