News Karnataka Kannada
Friday, May 10 2024
ಕ್ರೈಮ್

ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಪ್ರೇಮಿ

Bng Crime
Photo Credit : News Kannada

ಬೆಂಗಳೂರು: ಟಿಕ್‌ಟಾಕ್‌ ಮತ್ತು ಇನ್ಸ್ಟಾ ಮೂಲಕ ಪ್ರೇಮ ಪಕ್ಷಿಗಳಾದ ಅಬ್ರಾರ್ ಮತ್ತು ಮುಸ್ಕಾನ್ 5 ವರ್ಷಗಳಿಂದ ಒಬ್ಬರೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮುಸ್ಕಾನ್‌ ಮದುವೆ ಮದುವೆ ಬಗ್ಗೆ ಯೋಚನೆ ಮಾಡಿದ್ದಾಳೆ. ಇದರಿಂದ ಕದಡಿದ ಅಬ್ರಾರ್‌ ಬದಲಾಗೋದಕ್ಕೆ, ಆಕೆಯನ್ನು ನಿಧಾನವಾಗಿ ದೂರವಿಡಲು ಯೋಸಿದ್ದಾನೆ.

ಕೊನೆಗೆ ಅವಳು ಬೇಡವೇ ಬೇಡ ಅನ್ನೋ ನಿರ್ಧಾರ ಕೂಡ ಮಾಡಿದ್ದಾನೆ. ಇದರಿಂದ ನೊಂದ ಮುಸ್ಕಾನ್‌ ನೀನಿಲ್ಲ ಅಂದ್ರೆ ನಾನು ವಿಷ ಕುಡೀತೀನಿ ಅಂತ ಹೆದರಿಸಿದ್ದಾಳೆ. ಆದರೆ ಅಬ್ರಾರ್‌ ಇದನ್ನು ನಿಜ ಮಾಡಿದ್ದಾನೆ. ತಾನೇ ಮುಸ್ಕಾನ್‌ ಗೆ ವಿಷ ಇಲಿ ಪಾಷಣ ತಂದು ಕೊಟ್ಟು ಸಾಯಿಸಿದ್ದಾನೆ.

ನೀನು ಸತ್ತರೂ ಮದುವೆಯಾಗಲ್ಲ ಅಂದಿದ್ದ ಪ್ರೇಮಿ 5 ವರ್ಷ ಪ್ರೀತಿಸಿದ ಪ್ರೇಯಸಿಗೆ ವಿಷ ತಂದುಕೊಟ್ಟಿದ್ದ. ಆಕೆಯೋ ಅವನೇ ಬೇಡ ಅಂದಮೇಲೆ ನಾನೇಕೆ ಬದುಕಿರಬೇಕು ಎಂದು ಯೋಚಿಸಿ ಆತ ತಂದುಕೊಟ್ಟ ವಿಷವನ್ನ ಕುಡಿದು ಬಿಟ್ಟಿದ್ದಾಳೆ. ಇದನ್ನ ಗಮನಿಸಿದ ಆಕೆಯ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಕೆ ಮಾತ್ರ ಬದುಕುಳಿಯಲಿಲ್ಲ.
ಸದ್ಯ ಪ್ರಕರಣ ಸಂಬಂಧ ಕೇಸ್‌ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು