ರಾಮನಗರ: ಮೊಬೈಲ್ ಕದ್ದ ಬಾಲಕನನ್ನು ಹಲವು ಗಂಟೆಗಳ ಕಾಲ ಕೂಡಿ ಹಾಕಿದ ಘಟನೆ ರಾಮನಗರದ ವ್ಯಾಪ್ತಿಯ ಯಾರಬ್ ನಗರದಲ್ಲಿ ನಡೆದಿದೆ.
ದರ್ಗಾ ಉರುಸ್ ಪ್ರಯುಕ್ತ ಜೋಕಾಲಿಗಳನ್ನು ಹಾಕಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಬಾಲಕ ಅಂಗಡಿ ಮಾಲೀಕನ ಮೊಬೈಲ್ ಕದ್ದು ಪರಾರಿಯಾಗಲು ಪ್ರಯತ್ನಿಸಿದ್ದ. ಅದೇ ವೇಳೆ ಅಂಗಡಿ ಮಾಲೀಕ ಮೊಬೈಲ್ ಎಲ್ಲಿ ಎಂದು ಹುಡುಕಾಡಿದ್ದು, ಬಾಲಕನ ಜೇಬಿನಲ್ಲಿಯೇ ಮೊಬೈಲ್ ಸಿಕ್ಕಿಬಿದ್ದಿತ್ತು. ಬಳಿಕ ಅಂಗಡಿ ಮಾಲೀಕ ಬಾಲಕನನ್ನು ಬಿಲ್ಲಿಂಗ್ ಜಾಗದಲ್ಲಿ ಕೂಡಿ ಹಾಕಿದ್ದ ಅಲ್ಲದೆ ಆತನನ್ನು ಸರಪಳಿಯಿಂದ ಲಾಕ್ ಮಾಡಿದ್ದ. ಅನ್ನ ನೀರು ಕೊಡದೆ ಬಾಲಕನಿಗೆ ಶಿಕ್ಷೆ ನೀಡಿದ್ದ. ಈ ವಿಚಾರ ತಿಳಿದ ಸ್ಥಳೀಯರು ಬಾಲಕನನ್ನು ಬಿಡಿಸಿಕೊಂಡು ಹೋಗಿದ್ದಾರೆ.