News Karnataka Kannada
Tuesday, May 07 2024
ಕ್ರೈಮ್

ಮೊಬೈಲ್‌ ಕದ್ದ ಬಾಲಕನಿಗೆ ಹೀಗಾ ಶಿಕ್ಷೆ ನೀಡೋದು

Here's how a boy who stole a mobile phone will be punished
Photo Credit : News Kannada

ರಾಮನಗರ: ಮೊಬೈಲ್‌ ಕದ್ದ ಬಾಲಕನನ್ನು ಹಲವು ಗಂಟೆಗಳ ಕಾಲ ಕೂಡಿ ಹಾಕಿದ ಘಟನೆ ರಾಮನಗರದ ವ್ಯಾಪ್ತಿಯ ಯಾರಬ್‌ ನಗರದಲ್ಲಿ ನಡೆದಿದೆ.

ದರ್ಗಾ ಉರುಸ್‌ ಪ್ರಯುಕ್ತ ಜೋಕಾಲಿಗಳನ್ನು ಹಾಕಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಬಾಲಕ ಅಂಗಡಿ ಮಾಲೀಕನ ಮೊಬೈಲ್‌ ಕದ್ದು ಪರಾರಿಯಾಗಲು ಪ್ರಯತ್ನಿಸಿದ್ದ. ಅದೇ ವೇಳೆ ಅಂಗಡಿ ಮಾಲೀಕ ಮೊಬೈಲ್‌ ಎಲ್ಲಿ ಎಂದು ಹುಡುಕಾಡಿದ್ದು, ಬಾಲಕನ ಜೇಬಿನಲ್ಲಿಯೇ ಮೊಬೈಲ್‌ ಸಿಕ್ಕಿಬಿದ್ದಿತ್ತು. ಬಳಿಕ ಅಂಗಡಿ ಮಾಲೀಕ ಬಾಲಕನನ್ನು ಬಿಲ್ಲಿಂಗ್‌ ಜಾಗದಲ್ಲಿ ಕೂಡಿ ಹಾಕಿದ್ದ ಅಲ್ಲದೆ ಆತನನ್ನು ಸರಪಳಿಯಿಂದ ಲಾಕ್‌ ಮಾಡಿದ್ದ. ಅನ್ನ ನೀರು ಕೊಡದೆ ಬಾಲಕನಿಗೆ ಶಿಕ್ಷೆ ನೀಡಿದ್ದ. ಈ ವಿಚಾರ ತಿಳಿದ ಸ್ಥಳೀಯರು ಬಾಲಕನನ್ನು ಬಿಡಿಸಿಕೊಂಡು ಹೋಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು