ತುಮಕೂರು: ಹುಲಿ ಉಗುರು ಬಳಕೆ ಪ್ರಕರಣದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳತ್ತಿದೆ. ಈಗಾಗಲೇ ವರ್ತೂರು ಸಂತೋಷ್ ಈ ಕೇಸ್ ನಲ್ಲಿ ಅರೆಸ್ಟ್ ಆಗಿ ಕಂಬಿ ಎಣಿಸುತ್ತಿದ್ದಾರೆ.
ಈ ಸಾಲಿಗೆ ಖ್ಯಾತ ನಟ ದರ್ಶನ್, ಜಗ್ಗೇಶ್, ವಿನಯ್ ಗುರೂಜಿ, ಈಗ ಧನಂಜಯ್ ಗುರೂಜಿ ಹೆಸರು ತಗ್ಲಾಕೊಂಡಿದೆ. ಆದರೆ ದರ್ಶನ್ ಹಾಗು ವಿನಯ್ ಗುರೂಜಿ ವಿರುದ್ಧ ಕಳೆದ ದಿನ ಕೇಸ್ ದಾಖಲಾಗಿದೆ. ಈಗ ಧನಂಜಯ್ ಗುರೂಜಿಗೆ ಸಂಕಷ್ಟ ಎದುರಾಗಿದೆ.
ಹೌದು. . ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ ಒಡವೆಗಳ ಜತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.