ಬೆಂಗಳೂರು: ಬೈಂದೂರು ಮೂಲದ ಬೆಂಗಳೂರಿನ ಉದ್ಯಮಿ ಬಾಬು ಗೋವಿಂದ ಪೂಜಾರಿ ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ 3ನೇ ಆರೋಪಿ ಹಾಲಶ್ರೀಯವರನ್ನು ಬಂಧಿಸಲಾಗಿದೆ.
ಒಡಿಶಾದ ಕಟಕ್ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀ ಅರೆಸ್ಟ್ ಆಗಿದ್ದು ಇಂದು ರಾತ್ರಿ ಕಟಕ್ನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಈ ಮೊದಲು ಹಾಲಶ್ರೀ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ತಂಡ ಇದೀಗ ಸ್ವಾಮೀಜಿಯನ್ನು ಸೆರೆಹಿಡಿದಿದೆ.