ಬೀದರ್ : ಮನ್ನಳ್ಳಿ ಗ್ರಾಮದಲ್ಲಿ ರವಿವಾರ ಸಂಭವಿಸಿದ ದುರ್ಘಟನೆ ಮನ್ನಳ್ಳಿ ಚಿಂತಲಗೇರಾ ಮಧ್ಯೆ ರಸ್ತೆಯ ಪಕ್ಕ ವಿದ್ಯುತ್ ತಂತಿ ಕಡಿದು ಬಿದ್ದು.
ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಕಂಬದಿಂದ ಕಡಿದು ನೀರಲ್ಲಿ ಬಿದ್ದ ತಂತಿ ತಗುಲಿದ ವಿದ್ಯುತ್.
ಹೆಂಡತಿ ಉಳಿಸಲು ಹೋದ ಗಂಡನಿಗೂ ವಿದ್ಯುತ್ ತಂತಿ ತಗುಲಿ ದಂಪತಿಗಳಿಬ್ಬರೂ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ (51) ಹಾಗೂ ಶರಣಮ್ಮ (40) ಸಾವಿಗೀಡಾದ ರೈತ ದಂಪತಿ. ತಮ್ಮ ಹೊಲದಲ್ಲಿ ಕೃಷಿ ಕೆಲಸಕ್ಕೆಂದು ಹೋಗುವ ವೇಳೆ ಕೈಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಜೆಸ್ಕಾಂ ನಿರ್ಲಕ್ಷದಿಂದ ಈ ಘಟನೆ ನಡೆದಿದೆ
ಅನೇಕ ಸಾರಿ ಜಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಂಬದಿಂದ ಕಡಿದ ವಿದ್ಯುತ್ ತಂತಿ ಕುರಿತು ಹಲವು ಸಾರಿ ಮನವಿ ಮಾಡಿದರೂ ಕೂಡ ಕ್ರಮ ಸ್ಪಂದಿಸದೆ ನಿರ್ಲಕ್ಷ್ಯ ಮಾಡಿದರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸರ್ಕಾರ ಸೂಕ್ತವಾಗಿ ಅಧಿಕಾರಿಗಳ ಮೇಲೆ ಕ್ರಮ ತಗೊಂಡಿ ಹಾಗೂ ಕುಟುಂಬದ ಸದಸ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಅವರಿಗೆ ಸರ್ಕಾರದಿಂದ ತಲ 20 ಲಕ್ಷ ಪರಿಹಾರವನ್ನು ನೀಡಬೇಕು ಹಾಗೂ ಕುಟುಂಬದ ಒಬ್ಬ ಮಗನಿಗೆ ಸರ್ಕಾರದ ಕೆಲಸವನ್ನು ಕೂಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಕಾಶಿಬಾಯಿ ಗ್ರಾಮ ಪಂಚಾಯತ್ ಸದಸ್ಯರು ಶಂಕರ್, ದೇವಿಂದ್ರಪ್ಪ ಬಾವಿಕಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಅವರಿಗೆ ಒಟ್ಟು ಐದು ಜನ ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಇದ್ದಾರೆ.