ನವದೆಹಲಿ: ಇತ್ತೀಚೆಗೆ ವಿವಾಹ, ವಿವಾಹೇತರ ಸಂಬಂಧಗಳಿಗೆ ಟಿಂಡರ್ ದೇಶದಲ್ಲಿ ಬಹುದೊಡ್ಡ ವೇದಿಕೆಯಾಗಿದೆ. ಟಿಂಡರ್ ಡೇಟಿಂಗ್ ಆಪ್ ಬಳಕೆಯಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು ಎಂಬುದು ಮತ್ತೊಮ್ಮ ಸಾಬೀತಾಗಿದೆ.
28ರ ಹರೆಯದ ದುಶ್ಯಂತ್ ಶರ್ಮಾ ಟಿಂಡರ್ನಲ್ಲಿ ಪ್ರಿಯಾ ಸೇಠ್ ಎಂಬುವರೊಂದಿಗೆ ಟಿಂಡರ್ನಲ್ಲಿ ಮ್ಯಾಚ್ ಅದ ಬಳಿಕ ತುಂಬಾ ಖುಷಿಯಲ್ಲಿದ್ದ. 3 ತಿಂಗಳ ಕಾಲ ಆ್ಯಪ್ನಲ್ಲಿ ಮಾತನಾಡಿದ ನಂತರ, ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದರು.
27 ವರ್ಷ ವಯಸ್ಸಿನ ಯುವತಿ ಆತನನ್ನು ಮನೆಯೊಂದಕ್ಕೆ ಕರೆದಳು, ಈ ಪ್ರಸ್ತಾಪವನ್ನು ದುಶ್ಯಂತ್ ತಕ್ಷಣವೇ ಒಪ್ಪಿಕೊಂಡನು. ವಿವಾಹಿತರಾದ ದುಶ್ಯಂತ್ ತಾನು ದೆಹಲಿಯ ಶ್ರೀಮಂತ ಉದ್ಯಮಿ ವಿವಾನ್ ಕೊಹ್ಲಿ ಎಂದು ಹೇಳಿದ್ದ. ಮತ್ತೊಂದೆಡೆ ಪ್ರಿಯಾ, ಆತನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಮಾತುಕತೆ ನಡೆಸಿದ್ದಳು.
ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಸಹಾಯದಿಂದ ದುಶ್ಯಂತ್ ಮನೆಗೆ ಕಾಲಿಟ್ಟ ತಕ್ಷಣ ಪ್ರಿಯಾ ಅವರನ್ನು ಅಪಹರಿಸಿದ್ದಾರೆ. ಹಣಕ್ಕೆ ಕರೆ ಮಾಡಿದ ನಂತರ ತಾನು ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂದು ಅವರು ಅರಿತುಕೊಂಡರು. ದುಶ್ಯಂತ್ ಕುಟುಂಬವು 10 ಲಕ್ಷ ರೂ. ಪಾವತಿಸಲು ವಿಫಲವಾದ ನಂತರ, ಆರೋಪಿ ಅನೇಕ ಬಾರಿ ಚೂರಿಯಿಂದ ಇರಿದು ಮತ್ತು ತಲೆದಿಂಬಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.