ಇಂಫಾಲ: ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡರೂ ಹಿಂಸೆ ನಿಲ್ಲುತ್ತಿಲ್ಲ. ಸಾವಿರಾರು ಯೋಧರನ್ನು ನಿಯೋಜಿಸಿದರೂ, ಭದ್ರತೆಗೆ ಕ್ರಮ ತೆಗೆದುಕೊಂಡರೂ ಪರಿಸ್ಥಿತಿ ತಹಬಂದಿಗೆ ಬರುತ್ತಿಲ್ಲ. ರಜೆಗೆಂದು ಮನೆಗೆ ಆಗಮಿಸಿದ್ದ ಸಿಪಾಯಿ ಸೆಟೋ ಥಂಗ್ ಥಾಂಗ್ ಕೋಮ್ ಅವರನ್ನು ಸೆ.16 ರ ರಂದು ಶಸ್ತ್ರಧಾರಿಗಳು ಮನೆಯಿಂದಲೇ ಅಪಹರಿಸಿ ಹತ್ಯೆ ಮಾಡಿದ್ದಾರೆ.
ಅವರ ಶವವು ಭಾನುವಾರ(ಸೆ.17)ಪತ್ತೆಯಾಗಿದೆ. ಇದು ಈಗ ಮಣಿಪುರ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಇವರು ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಇನ್ನು ಯೋಧನ ಹತ್ಯೆಯನ್ನು ಸೇನೆಯು ಖಂಡಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.
What is going on in #Manipur?
Army Soldier abducted, Killed in Manipur.
The body of an Indian Army soldier was found at Khuningthek village in Manipur’s Imphal East district.He was Sepoy Serto Thangthang Kom of the Army's Defence Security Corps (DSC).
The armed men placed a… pic.twitter.com/yfnd61gHFT
— তন্ময় l T͞anmoy l (@tanmoyofc) September 17, 2023
ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ.
ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 150 ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ