ಇಂಡಿಯನ್ ಬೆರಿ ತುಳುವರ ಪುನರ್ಪುಳಿ ಬಲು ಉಪಕಾರಿ

ಕೊಕಂ ಅನ್ನು ತುಳುವರು ಪುನರ್ಪುಳಿ ಎಂದು ಕರೆಯತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನ ಕರೆಯಲ್ಪಡುವ ಈ ಹಣ್ಣನ್ನು ಕಂಡರಿಯದವರಿಲ್ಲ. ಹಚ್ಚಹಸಿರಿನ ಗಿಡ ತುಂಬಾನೇ ಸೊಂಪಾಗಿ ಬೆಳೆದಿರುತ್ತದೆ. ಸರಿಯಾದ ಸಮಯದಲ್ಲಿ ಕಡು ಮೆರುನ್ ಬಣ್ಣದ ಹಣ್ಣು ಗೋಚರಿಸುತ್ತದೆ.

ಹಣ್ಣಿನ ಒಳಗಡೆ ಬಿಳಿಯ ಬಣ್ಣದ ಹಣ್ಣುಗಳು ಸ್ವಲ್ಪ ಹುಳಿ ಅನಿಸಿದರು ತಿನ್ನಲು ಬಹಳ ರುಚಿಕರ. ಈ ಪುನರ್ಪುಳಿ ಬಲೂ ಉಪಕಾರಿ ಚಟ್ನಿ,ಜ್ಯೂಸ್, ಸಾರು ಹೀಗೆ ಹಲವು ರೀತಿಯಲ್ಲಿ ದಿನನಿತ್ಯದ ಬಳಸಬಹುದು.

ಪುನರ್ಪುಳಿಯ ಎಲೆಯ ಚಟ್ನಿ ಇನ್ನು ರುಚಿಕರ. ತೆಂಗಿನ ಕಾಯಿ ತುರಿದು, ಮೆಣಸು ಅಗತ್ಯ ಸಾಮಾಗ್ರಿಯನ್ನು ಸೇರಿಸಿ ಅದಕ್ಕೆ ಪುನರ್ ಪುಳಿಯ ಎಲೆಯನ್ನು ಸೇರಿಸಿ ಚೆನ್ನಾಗಿ ಗೈಡ್ ಮಾಡಿ ಊಣಿಸಲು ಪುನರ್ಪುಳಿಯ ಚಟ್ನಿ ರೆಡಿ, ಕೆಲವರು ಪುನರ್ ಪುಳಿ ಎಲೆಯನ್ನು ಬಿಸಿನೀರಿನಲ್ಲಿ ಸ್ವಲ್ಪ ನೆನೆಸಿಟ್ಟು ಚಟ್ನಿ ತಯಾರಿಸಲು ಬಳಸುತ್ತಾರೆ. ಎಲೆಯ ಹಸಿ ವಾಸನೆ ದೂರವಾಗಿಸಲು ಸಹಕಾರಿ.

ಪುನರ್ಪುಳಿಯ ಪರಿಚಿತರು ಇದರ ಬಗ್ಗೆ ತಿಳಿಯದವರಿಲ್ಲ. ಒಂದು ಪಾತ್ರೆಯಲ್ಲಿ ಒಣಗಿದ ಪುನರ್ಪುಳಿಯ ಸಿಪ್ಪೆಯನ್ನು ನೀರಿನಲ್ಲಿ ನೆನೆಯಲು ಹಾಕಬೇಕು. ಸುಮಾರು ನಾಲ್ಕು ತಾಸುಗಳ ಸಮಯದ ನಂತರ ಅದು ಸಂಪೂರ್ಣವಾಗಿ ಬಣ್ಣ ಬಿಟ್ಟಿರುತ್ತದೆ. ಮತ್ತೆ ಅದೇ ನೀರು ಮತ್ತು ಸಿಪ್ಪೆಯನ್ನು ಕುದಿಸಲು ಇಡಬೇಕು. ಸಿಪ್ಪೆಯನ್ನು ನೀರಿನಿಂದ ಬೇರ್ಪಡಿಸಿದ ನಂತರ ಹತ್ತು ಬೆಳ್ಳುಳ್ಳಿ, ಸಾಸಿವೆ ಕರಿಬೇವು ಖಾರ ಬೇಕು ಅನಿಸಿದಲ್ಲಿ ಹಸಿ ಮೆಣಸು ಸೇರಿಸಿ ಒಗ್ಗರಣೆ ಕೊಟ್ಟರೆ ಪುನರ್ಪುಳಿಯ ಸಾರು ರೆಡಿ.

ಪುನರ್ಪುಳಿಯ ಎಲೆಯ ಚಟ್ನಿ ಇನ್ನು ರುಚಿಕರ. ತೆಂಗಿನ ಕಾಯಿ ತುರಿದು, ಮೆಣಸು ಅಗತ್ಯ ಸಾಮಾಗ್ರಿಯನ್ನು ಸೇರಿಸಿ ಅದಕ್ಕೆ ಪುನರ್ ಪುಳಿಯ ಎಲೆಯನ್ನು ಸೇರಿಸಿ ಚೆನ್ನಾಗಿ ಗೈಡ್ ಮಾಡಿದರೆ ಪುನರ್ಪುಳಿಯ ಚಟ್ನಿ ರೆಡಿ, ಕೆಲವರು ಪುನರ್ ಪುಳಿ ಎಲೆಯನ್ನು ಬಿಸಿನೀರಿನಲ್ಲಿ ಸ್ವಲ್ಪ ನೆನೆಸಿಟ್ಟು ಚಟ್ನಿ ತಯಾರಿಸಲು ಬಳಸುತ್ತಾರೆ. ಎಲೆಯ ಹಸಿತನದ ವಾಸನೆ ದೂರವಾಗಿಸಲು ಸಹಕಾರಿ.

ಪುನರ್ಪುಳಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ. ಉತ್ತಮ ಜೀರ್ಣಕ್ರಿಯೆಗೂ ಸಹಕಾರಿಯಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಜ್ಯೂಸ್ ಇನ್ನು ಉತ್ತಮ. ದೇಹವನ್ನು ತಂಪಾಗಿಡಿಸುತ್ತದೆ. ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಪಿತ್ತದ ಪ್ರಮಾಣವನ್ನು ಕಡಿಮೆಗೊಳಿಸಲು ಇದು ಉಪಯುಕ್ತ.

ಪುನರ್ಪುಳಿಯ ಜ್ಯೂಸ್ ಸುಲಭ ರೀತಿಯಲ್ಲಿ ತಯಾರಿಸಬಹುದು. ಪುನರ್ಪುಳಿ ಹಣ್ಣಿನ ಸಿಪ್ಪೆಯನ್ನು ಒಂದು ಕಪ್ ಬಿಸಿನೀರಿನಲ್ಲಿ ಅರ್ಧ ಗಂಟೆ ಕಾಲ ನೆನಸಿಡಬೇಕು. ನೀರಿನ ಬಣ್ಣ ಕೆಂಪಗಾಗುವವರೆಗೂ ಕಾದು, ನಂತರ ಪುರ್ನಪುಳಿ ಹಣ್ಣಿನ ಸಿಪ್ಪೆಯನ್ನು ಮೆದುವಾಗಿ ಹಿಚುಕಬೇಕು. ಸಿಪ್ಪೆಯನ್ನು ಬೇರ್ಪಡಿಸಬೇಕು. ಮೂರರಿಂದ ನಾಲ್ಕು ಗ್ಲಾಸ್ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ೧೫ ನಿಮಿಷ ಫ್ರಿಡ್ಜ್ ನಲ್ಲಿ ಇಟ್ಟು ಹೊರತೆಗೆಯಬೇಕು ಹೀಗೆ ಪುನರ್ ಪುಳಿ ಜ್ಯೂಸ್ ರೆಡಿ.

Ashika S

Recent Posts

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

16 seconds ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

12 mins ago

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

30 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಹೊಸ ಉದ್ಯೋಗ ಆಫರ್ ಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…

40 mins ago

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

8 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

9 hours ago