ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ವೇಳೆ ತೆಲುಗು ನಟ ಗೋಪಿಚಂದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರ್ದೇಶಕ ಶ್ರೀವಾಸ್ ನಿರ್ದೇಶನದ ಹೆಸರಿಡದ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಗೋಪಿಚಂದ್ ಅವರ ಕಾಲಿಗೆ ಪೆಟ್ಟು ಬಿದ್ದಿದ್ದು, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಾಹಸ ದೃಶ್ಯದ ವೇಳೆ ಗೋಪಿಚಂದ್ ಅವರ ಕಾಲು ಜಾರಿದ್ದರಿಂದ ಸಣ್ಣ ಗಾಯವಾಗಿದ್ದು, ಇತರೆ ಯಾರಿಗೂ ಏನೂ ಆಗಿಲ್ಲ. ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರ ತಂಡ ಹೇಳಿಕೆಯಲ್ಲಿ ತಿಳಿಸಿದೆ.