ಮುಂಬೈ: ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವು ಶುಕ್ರವಾರ ಮುಂಬೈನಲ್ಲಿ ಉದ್ಘಾಟನೆಯಾಗಲಿದ್ದು, ಇದು ಸಂಗೀತ, ರಂಗಭೂಮಿ, ಕಲೆ, ಕರಕುಶಲ ವಸ್ತುಗಳನ್ನು ಹೊಂದಿರವ ಕೇಂದ್ರವಾಗಿದೆ.
ಕಾರ್ಯಕ್ರಮ ಉದ್ಘಾಟನೆಯ ವೇಳೆ ‘ಸ್ವದೇಶ್’ ಕ್ಯುರೇಟೆಡ್ ಕಲೆ ಮತ್ತು ಕರಕುಶಲ ಪ್ರದರ್ಶನ ಆಯೋಜಿಸಲಾಗಿದೆ. ‘ದಿ ಗ್ರೇಟ್ ಇಂಡಿಯನ್ ಮ್ಯೂಸಿಕಲ್: ಸಿವಿಲೈಸೇಶನ್ ಟು ನೇಷನ್’ ಎಂಬ ಸಂಗೀತ ನಾಟಕ; ‘ಇಂಡಿಯಾ ಇನ್ ಫ್ಯಾಶನ್’ ಎಂಬ ವೇಷಭೂಷಣ ಕಲಾ ಪ್ರದರ್ಶನ; ‘ಸಂಗಮ, ಸಂಗಮ’ ಶೀರ್ಷಿಕೆಯ ದೃಶ್ಯ ಕಲಾ ಪ್ರದರ್ಶನ ಆಯೋಜಿಸಲಾಗಿದೆ.
ಭಾರತದ ಸಾಂಸ್ಕೃತಿಕ ಸಂಪ್ರದಾಯಗಳ ವೈವಿಧ್ಯತೆಯನ್ನು ಈ ಕೇಂದ್ರ ಪ್ರತಿಬಿಂಬಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ನೀತಾ ಅಂಬಾನಿ, “ಈ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆಯಾಗುತ್ತಿರುವುದಕ್ಕೆ ಸಂತಸವಾಗಿದೆ. ಸಿನಿಮಾ ಮತ್ತು ಸಂಗೀತ, ನೃತ್ಯ ಮತ್ತು ನಾಟಕದಲ್ಲಿ ದೇಶದ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಚಾರ ಮಾಡಲು ನಾವು ಉತ್ಸುಕರಾಗಿದ್ದೇವೆ. ಸಾಹಿತ್ಯ ಮತ್ತು ಜಾನಪದ, ಕಲೆ ಮತ್ತು ಕರಕುಶಲ ಮತ್ತು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಭಾರತದ ಜೀವಾಳ ಎಂದು ಅವರು ತಿಳಿಸಿದ್ದಾರೆ.
ಕೇಂದ್ರಕ್ಕೆ ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಉಚಿತ ಪ್ರವೇಶವಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಹೃದಯಭಾಗದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ನೊಳಗೆ ಈ ಕೇಂದ್ರವಿದೆ. ಕೇಂದ್ರವು 2,000-ಆಸನ ಸಾಮರ್ಥ್ಯದ ಹೊಂದಿದೆ.